ಹುಣಸೂರು:
ಡೀಡ್ ಸಂಸ್ಥೆ, ಸದೃಢ ಚಾರಿಟಬಲ್ ಟ್ರಸ್ಟ್ ಮತ್ತು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 142 ಮಂದಿ ತಪಾಸಣೆಗೊಳಗಾದರೆ, ಈ ಪೈಕಿ 71 ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ತಾಲೂಕಿನಲ್ಲಿ ಆಯೋಜನೆಗೊಂಡಿರುವ 25ನೇ ಶಿಬಿರ ಇದಾಗಿದ್ದು, ನೂರಾರು ಜನರು ಮುಖ್ಯವಾಗಿ ಆದಿವಾಸಿ ಗಿರಿಜನರು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. 1140 ಮಂದಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗಿದೆ ಎಂದರು.
ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ಯಕ್ರಮ ಸಂಯೋಜಕ ಶೀಕಂಠಮೂರ್ತಿ ಮಾತನಾಡಿ, ಪ್ರತಿ ತಿಂಗಳ ಮೂರನೇ ಬುಧವಾರ ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಶಿಬಿರ ಆಯೋಜಿಸಲಾಗುತ್ತಿದ್ದು, ಏ.16ರಂದು ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸದೃಢ ಚಾರಿಟಬಲ್ ಟ್ರಸ್ಟ್ ನ ಮಂಜುನಾಥ್, ಈ ಹಿಂದೆ ತಪಾಸಣೆಗೊಳಗಾದವರ ಪೈಕಿ 45ಮಂದಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.
ಡಾ.ಸಾಗರೀಕ, ಬುಡಕಟ್ಟು ಕೃಷಿಕರ ಸಂಘದ ಪಿ.ಕೆ.ರಾಮು, ರಕ್ಷಿತಾ, ಜಿ.ಎಸ್.ಉಷಾ, ಮೋಹನ ಕುಮಾರ್, ಸುನಿಲ್, ಅಜಯ್ಕುಮಾರ್ ಇತರರು ಹಾಜರಿದ್ದರು.
೨೦ಊUಓ೨: ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ತಪಾಸಣೆಗೊಳಗಾದ ೭೧ ಮಂದಿಗೆ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ಸದೃಢ ಚಾರಿಟಬಲ್ ಟ್ರಸ್ಟ್ ನ ಮಂಜುನಾಥ್, ಜಿ.ಎಸ್.ಉಷಾ, ಡಾ.ಸಾಗರೀಕ ಇತರರಿದ್ದಾರೆ.