ಪ್ರತಿನಿಧಿ ವರದಿ ಬೆಟ್ಟದಪುರ
ಬೆಟ್ಟದಪುರ ಸಮೀಪದ ಬೆಟ್ಟದತುಂಗ ಅರೋಗ್ಯ ಕೇಂದ್ರ ವ್ಯಾಪ್ತಿಯ ಡಿಜಿ ಕೊಪ್ಪಲು ಗ್ರಾಮದಲ್ಲಿ ಅರೋಗ್ಯ ಇಲಾಖೆಯಿಂದ ಶುಕ್ರವಾರ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮ ನಡೆಯಿತು.
ಅಸಾಂಕ್ರಾಮಿಕ ರೋಗಗಳ ಕುರಿತು ಜನರಲ್ಲಿ ಅರಿವು ಮೂಡಿಸಿ ಅರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲದೇ ಆಬಾ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಸುಮಾರು 65ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ವೈದ್ಯಾಧಿಕಾರಿ ಡಾ.ವಿ.ಕೃಪೇಶ್ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ಗ್ರಾಮೀಣರು ಅರಿತುಕೊಳ್ಳಬೇಕು. ಯಾವುದೇ ಅರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ಚಿಕಿತ್ಸೆ ಹಾಗೂ ಸಲಹೆ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ಸುರಕ್ಷಾಧಿಕಾರಿ ಎಂ.ಕೆ.ಮಮತಾ, ಸಮುದಾಯ ಆರೋಗ್ಯಾಧಿಕಾರಿ ಜೆ.ಎಸ್.ಅನಿಲ್, ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಂಜು, ಆಶಾ ಕಾರ್ಯಕರ್ತೆ ಹೇಮಾ, ತಾಲೂಕು ಎನ್ಸಿಡಿ ಘಟಕದ ಪ್ರಯೋಗ ಶಾಲಾ ತಂತ್ರಜ್ಞ ಹೇಮ, ಶುಶ್ರೂಷಾಧಿಕಾರಿ ರೂಪ, ಆಪ್ತ ಸಮಾಲೋಚಕಿ ರೇಖಾ, ಐಸಿಟಿಸಿ ಪ್ರಯೋಗ ತಂತ್ರಜ್ಞ ವೀರೇಶ್, ಪ್ರಕಾಶ್ ಹಾಗೂ ಸಾರ್ವಜನಿಕರು ಇದ್ದರು.
13ಬಿಟಿಪಿ01: ಬೆಟ್ಟದತುಂಗ ಅರೋಗ್ಯ ಕೇಂದ್ರ ವ್ಯಾಪ್ತಿಯ ಡಿಜಿ ಕೊಪ್ಪಲು ಗ್ರಾಮದಲ್ಲಿ ಅರೋಗ್ಯ ಇಲಾಖೆಯಿಂದ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮ ನಡೆಯಿತು.