ಗೋಣಿಕೊಪ್ಪ: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಗೌರಿ ಗಣೇಶೋತ್ಸವ ಆಚರಿಸಲಾಯಿತು.
ಸಂಸ್ಥೆ ಸಂಸ್ಥಾಪಕಿ ಡಾ.ಶಾಂತಿ ಅಚ್ಚಪ್ಪ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣಪತಿ ತಯಾರಿಸಿದರು. ಪೂಜಾ ವಿಧಿ ವಿಧಾನ, ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪರಿಸರ ಪೂರಕವಾಗಿ ವಿಸರ್ಜಿಸಲಾಯಿತು. ಟ್ರಸ್ಟಿ ಅಯ್ಯಪ್ಪ ಅಚ್ಚಪ್ಪ, ಮುಖ್ಯ ಶಿಕ್ಷಕಿ ಪುಷ್ಪ ಇದ್ದರು.
ಫೋಟೋ
Leave a comment