ಎಸ್ಸಿ ಮೀಸಲಿದ್ದ ಅಧ್ಯಕ್ಷ ಸ್ಥಾನ । ಉಪಾಧ್ಯಕ್ಷೆಯಾದ ಮಂಜುಳಾ
ಪ್ರತಿನಿಧಿ ವರದಿ ತಿ.ನರಸೀಪುರ
ಕುಪ್ಯ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಗವಿಸಿದ್ದಯ್ಯ, ಉಪಾಧ್ಯಕ್ಷರಾಗಿ ಮಂಜುಳಾ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕಿನ ಕುಪ್ಯಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಕಚೇರಿ ಆರವರಣದಲ್ಲಿ ಮಂಗಳವಾರ ಚುನಾವಣೆ ನಡೆಯಿತು. 12 ಸದಸ್ಯರ ಸಂಖ್ಯೆ ಬಲವಿರುವ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗವಿಸಿದ್ದಯ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳ ನಾಮಪತ್ರ ಮಾತ್ರ ಸಲ್ಲಿಸಿದ್ದರು. ಅಧ್ಯಕ್ಷರಾಗಿ ಗವಿಸಿದ್ದಯ್ಯ, ಉಪಾಧ್ಯಕ್ಷರಾಗಿ ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಕೃಷ್ಣಮೂರ್ತಿ ಘೋಷಿಸಿದರು.
ನೂತನ ಅಧ್ಯಕ್ಷ ಗವಿಸಿದ್ದಯ್ಯ ಮಾತನಾಡಿ, ಎಲ್ಲ ಮುಖಂಡರು, ಹಿತೈಷಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಸದಸ್ಯರ ಸಹಕಾರ ಪಡೆದು ಪಂಚಾಯಿತಿಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸ್ವಚ್ಛತೆ, ಬೀದಿ ದೀಪ, ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತೇವೆ ಎಂದರು.
ನೂತನ ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಾಘವೇಂದ್ರ, ಭಾಗ್ಯಮ್ಮ, ನಂದಿನಿ, ಗೋವಿಂದ, ಪುಟ್ಟರಾಜು, ಮಹದೇವ ಶೆಟ್ಟಿ, ಯಶೋಧ, ಶಿವಮ್ಮ, ಪದ್ಮ, ಪುಷ್ಪ, ಪಿಡಿಒ ಅಮ್ಜದ್ ಪಾಷಾ, ಮುಖಂಡ ಅಂದಾನಿ, ಭಾಗ್ಯಮ್ಮ, ಕರೊಹಟ್ಟಿ ಮಹದೇವಯ್ಯ, ಅಂದಾನಿ, ಪ್ರಭಾಕರ್, ಕೆ.ಶಿವರಾಂ, ಬಸವೇಗೌಡ, ಶಿವಪ್ಪ, ಗ್ರಾಪಂ ಸದ್ಯಸ ಪುಟ್ಟಸ್ವಾಮಿ, ಹಿಟ್ಟುವಳ್ಳಿ ಮಹದೇವಸ್ವಾಮಿ, ಮಾರೇಗೌಡ, ಜೆ.ಶಿವರಾಂ, ತುಂಬಲ ಮಂಜುನಾಥ್, ಸೋಮನಾಥಪುರ, ಗಣೇಶ್, ಕೆಇಬಿ ಜಯರಾಮ್, ಕಂಬಯ್ಯ, ಆನಂದ, ನಿರಂಜನ್, ಮಹೇಶ್, ನಾಗರಾಜು, ಮರಯ್ಯ, ಗ್ರಾಮಸ್ಥರು ಹಾಜರಿದ್ದರು.
—————-
ಬಾಕ್ಸ್:
ಗಣ್ಯರ ಕಿವಿ ಮಾತು: ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಗವಿಸಿದ್ದಯ್ಯ ಮತ್ತು ಉಪಾಧ್ಯಕ್ಷೆಯಾದ ಮಂಜುಳಾ ಅವರಿಗೆ ಕರೋಹಟ್ಟಿ ಮಹದೇವಯ್ಯ, ಸೋಮನಾಥಪುರ ಗಣೇಶ್, ತುಂಬಲ ಮಂಜುನಾಥ್ ಅವರು ಅಭಿನಂದನೆ ಸಲ್ಲಿಸಿದರು. ಜನಪರ ಕೆಲಸಗಳನ್ನು ಮಾಡುವಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ರಿಗೆ ಕಿವಿಮಾತು ಹೇಳಿದರು.
——————
ಕೋಟ್:
ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಯ್ಕೆ ಮಾಡಲಾಗಿದೆ. ಎಲ್ಲ ಸದಸ್ಯರು ಕೂಡ ಆಯ್ಕೆಯಲ್ಲಿ ಸಹಕರಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ.
ಭಾಗ್ಯಮ್ಮ, ಕಾಂಗ್ರೆಸ್ ಮುಖಂಡೆ.
—————-
ಎಲ್ಲ ಸದಸ್ಯರು ಬೆಂಬಲದಿಂದ ನಾನು ಆಯ್ಕೆಯಾಗಿದ್ದು, ನರೇಗಾ, ಹಣಕಾಸು ಯೋಜನೆಗಳು, ಕರ ಸಂಗ್ರಹಣೆ, ವಿವಿಧ ಅನುಧಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಸ್ತೆ, ಕುಡಿಯುವ ನೀರು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಕಡೆ ಹೆಚ್ಚು ಗಮನಹರಿಸಲಾಗುವುದು.
ಗವಿಸಿದ್ದಯ್ಯ, ನೂತನ ಅಧ್ಯಕ್ಷ ಕುಪ್ಯ ಗ್ರಾ.ಪಂ.