ಜಿಲ್ಲಾ ಜನಜಾಗೃತಿ ನಿರ್ದೇಶಕ ಕೇಶವ ದೇವಾಂಗ ಅಭಿಪ್ರಾಯ
ಪ್ರತಿನಿಧಿ ವರದಿ ಹೊಳೆನರಸೀಪುರ
ಶ್ರೀ ಕ್ಷೇತ್ರ ಧರ್ಮಸ್ಥಳ ಹೆಗ್ಗಡೆಯವರಿಗೆ ಪ್ರಿಯವಾದವರು ವಿದ್ಯಾರ್ಥಿಗಳು. ಸರ್ಕಾರಿ ಶಾಲೆ ಮತ್ತು ಧರ್ಮಸ್ಥಳ ಸಂಸ್ಥೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಜಿಲ್ಲಾ ಜನಜಾಗೃತಿ ನಿರ್ದೇಶಕ ಕೇಶವ ದೇವಾಂಗ ಅಭಿಪ್ರಾಯಪಟ್ಟರು.
ಪಟ್ಟಣದ ಕೋಟೆ ಮುಖ್ಯ ರಸ್ತೆಯಲ್ಲಿರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುಜ್ಞಾನ ನಿಧಿ ಶಿಷ್ಯ ವೇತನ ಪಡೆಯುಂತಹ ಎಂಬತ್ತು ವಿದ್ಯಾರ್ಥಿಗಳಿಗೆ ಮಂಜೂರಾತಿ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎನ್ನುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಸೌಲಭ್ಯ ಸಿಗಬೇಕೆಂದು ಬಹಳ ಪ್ರೀತಿಯ ಕಾರ್ಯಕ್ರಮವನ್ನಾಗಿಟ್ಟುಕೊಂಡು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಕ್ರೀಡಾಂಗಣ ಅಗಲೀಕರಣ, ಕಾಂಪೌಂಡ್ ರಚನೆ ಕಟ್ಟಡ ರಚನೆ, ರಿಪೇರಿ, ರಂಗಮಂದಿರ, ಶೌಚಾಲಯ, ನೀರಿನ ಟ್ಯಾಂಕ್, ಕರಿಹಲಗೆ ನಿರ್ಮಾಣ, ಶಾಲೆಗೆ ವಿದ್ಯುಧೀಕರಣ, ಬೆಂಚು, ಡೆಸ್ಕ್ ಗಳು, ಟೀಚರ್ಸ್ ಗಳನ್ನು ನೇಮಿಸಿಕೊಳ್ಳಲು ಹೀಗೆ ಪ್ರತಿಯೊಂದಕ್ಕೂ ಧರ್ಮಸ್ಥಳ ಯೋಜನೆಯಿಂದ ಅನುದಾನವಿದೆ. ಮಕ್ಕಳಿಗೆ ವಿದ್ಯಾಬ್ಯಾಸ ಚೆನ್ನಾಗಿ ಆಗಬೇಕೆಂಬ ದೃಷ್ಠಿಯಿಂದ ಈ ವರ್ಷ 1500 ಟೀಚರ್ಸ್ ಗಳನ್ನು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ನೇಮಿಸಲಾಗಿದೆ. ಮಕ್ಕಳ ಶಿಕ್ಷಣದ ಮಟ್ಟ ಹೆಚ್ಚಬೇಕೆಂದು ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಗೆ ಒಬ್ಬ ಟೀಚರ್ ನೇಮಕ ಮಾಡಿ ಮೂರು ತಿಂಗಳ ಸಂಭಾವನೆ ಕೊಡುವ ಯೋಜನೆ ಇಟ್ಟು ಕೊಳ್ಳಲಾಗಿದೆ. 60 ಲಕ್ಷಕ್ಕೂ ಮಿಕ್ಕಿ ಸಂಘದ ಸದಸ್ಯರಿದ್ದಾರೆ. ಅವರ ಮಕ್ಕಳಿಗಾಗಿ ಕಳೆದ ಇಪ್ಪತ್ತೆರಡು ವರ್ಷಗಳಿಂದ ಸುಜ್ಞಾನ ನಿಧಿ ಶಿಷ್ಯವೇತನ ಯೋಜನೆ ಜಾರಿಗೆ ತಂದಿದ್ದಾರೆ. ಬಡ ವಿದ್ಯಾರ್ಥಿಗಳ ಭವಿಷ್ಯವನ್ನ ರೂಪಿಸುವ ಉದ್ದೇಶವಿಟ್ಟುಕೊಂಡು 22 ವರ್ಷಗಳಿಂದ 45 ಸಾವಿರ ಮಂದಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಸುಮಾರು ಒಂದುವರೆ ಕೋಟಿ ಮೊತ್ತವನ್ನು ಈಗಾಗಲೇ ಸುಜ್ಞಾನ ನಿಧಿ ಶಿಷ್ಯವೇತನಕ್ಕೆ ವಿನಿಯೋಗ ಮಾಡಿದೆ. ಪೂಜ್ಯರು ಜನಪರ ಯೋಜನೆಗಳನ್ನು ರೂಪಿಸಿದ್ದಾರೆಂದು ತಿಳಿಸುತ್ತಾ ವಿದ್ಯಾರ್ಥಿಗಳು ಹಾಗೂ ಪೋಷಕರು ಸದುಪಯೋಗ ಪಡೆದುಕೊಳ್ಳಿ ಎಂದರು.
ತಾಲೂಕು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸೂರ್ಯನಾರಾಯಣ, ಜನಜಾಗೃತಿ ವೇದಿಕೆ ಸದಸ್ಯರಾದ ಎ.ಜಗನ್ನಾಥ್, ಆರ್.ಬಿ.ಪುಟ್ಟೆಗೌಡ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಚಿತ್ರ: ಹೊಳೆನರಸೀಪುರ ಪಟ್ಟಣದ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಲ್ಲಿ ಸುಜ್ಞಾನ ನಿಧಿ ಶಿಷ್ಯ ವೇತನ ಪಡೆಯುಂತಹ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣೆಯನ್ನು ಜಿಲ್ಲಾ ಜನಜಾಗೃತಿ ನಿರ್ದೇಶಕ ಕೇಸವ ದೇವಾಂಗ ವಿತರಿಸಿದರು.