ಮಂಡ್ಯ: ಸರ್ಕಾರ ತಮಿಳುನಾಡಿಗೆ ಕೆ.ಆರ್.ಎಸ್ ಜಲಾಶಯದಿಂದ ಕದ್ದು ಮುಚ್ಚಿ ಹರಿಸಲಾಗುತ್ತಿದಿಯಾ ಎಂಬ ಅನುಮಾನ ಶುರುವಾಗಿದೆ. ಹೌದು ಅಧಿಕಾರಿಗಳು ಕೊಟ್ಟಿರುವ ಅಂಕಿ ಅಂಶ. ಪ್ರತಿದಿನ ನದಿಗೆ 2 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಇದೇ ರೀತಿ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ಇನ್ನ 10 ದಿನಗಳ ಕಾಲ ಹರಿಸಿದರೆ 7 ಟಿಎಂಸಿಯಷ್ಟು ನೀರು ಜಲಾಶಯದಲ್ಲಿ ಖಾಲಿಯಾಗಲಿದೆ. ಸದ್ಯ ಜಲಾಶಯದಲ್ಲಿ 20 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಕೆಆರ್ಎಸ್ ಜಲಾಶಯದ ಗರಿಷ್ಠಮಟ್ಟ 124.80 ಅಡಿ ಇದ್ದು, ಇಂದಿನ ಮಟ್ಟ 97.08 ಅಡಿ ಇದೆ. ಒಳಹರಿವು 6016 ಕ್ಯೂಸೆಕ್ ಇದೆ. ಹೊರಹರಿವು 5735 ಕ್ಯೂಸೆಕ್ ಇದೆ.