ಬಯಪ್ಪ ಅಧ್ಯಕ್ಷ ವಿ.ಶಾಂತಕುಮಾರ್
ದೇವನಹಳ್ಳಿ: ದೇವನಹಳ್ಳಿ ತಾಲೂಕಿನಲ್ಲಿರುವ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮೂಲಕ ಬಯಪ್ಪ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಬಯಪ್ಪ ಅಧ್ಯಕ್ಷ ವಿ.ಶಾಂತಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಮದಲ್ಲಿ ಕೊಯಿರ ಗ್ರಾಪಂ ಗ್ರಾಮಸ್ಥರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನಿರ್ದೇಶಕರುಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದರು.
ರಾಜ್ಯದಲ್ಲಿ ನಮ್ಮದೇ ಸರ್ಕಾರ ಬಂದಿದೆ. ಕ್ಷೇತ್ರದಲ್ಲಿ ಶಾಸಕರನ್ನು ಗೆಲ್ಲಿಸಿಕೊಂಡಿದ್ದು, ಸಚಿವ ಸ್ಥಾನಮಾನವು ಸಿಕ್ಕಿರುವುದು ಇತಿಹಾಸವಾಗಿದೆ. ೨೨೪ ಶಾಸಕರ ಪೈಕಿ ಕೆ.ಎಚ್.ಮುನಿಯಪ್ಪ ನಂ.೧ ಎಂಎಲ್ಎ ಆಗಿದ್ದಾರೆ. ಹಿಡಿದ ಕೆಲಸ ಮಾಡುವವರೆಗೆ ಬಿಡುವುದಿಲ್ಲ ಇಂತಹ ಶಾಸಕರನ್ನು ಪಡೆದುಕೊಂಡಿರುವ ದೇವನಹಳ್ಳಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯನ್ನು ಕಾಣುವುದರಲ್ಲಿ ಸಂದೇಹವಿಲ್ಲವೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಮಾರಂಭದಲ್ಲಿ ಹೇಳಿದ್ದಾರೆ ಎಂದು ಹೇಳಿದರು.
ಬಯಪ್ಪ ನಿರ್ದೇಶಕ ಸಿ.ಪ್ರಸನ್ನಕುಮಾರ್ ಮಾತನಾಡಿದರು. ಈ ವೇಳೆ ಕೊಯಿರ ಗ್ರಾಪಂ ಮಾಜಿ ಉಪಾಧ್ಯಕ್ಷ ಮುನಿಆಂಜಿನಪ್ಪ, ವಿಶ್ವನಾಥಪುರ ವಿಎಸ್ಸೆಸ್ಸೆನ್ ಸೊಸೈಟಿ ಸದಸ್ಯ ಮುನೇಗೌಡ, ಖಾದಿಬೋರ್ಡ್ ನಿರ್ದೇಶಕ ಶ್ರೀನಿವಾಸ್, ಮುಖಂಡರಾದ ಶಿವಾಜಿಗೌಡ, ಸಂಪಂಗೀಗೌಡ, ಹೊಸೂರು ನಂಜೇಗೌಡ, ಸುಬ್ಬೇಗೌಡ, ಶ್ರೀನಿವಾಸ್(ಎಚ್ವಿಎಸ್), ರಬ್ಬನಹಳ್ಳಿ ಡಾ.ಡಿ.ಕೆಂಪಣ್ಣ, ಕೊಯಿರ ಶ್ರೀನಿವಾಸ್, ಆಂಜಿನಮ್ಮ, ಮಮತಾಶಿವಾಜಿ, ಅಶ್ವತ್ಥಮ್ಮ, ಸಂಕೇತ್, ಸೀಕಾಯನಹಳ್ಳಿ ಶ್ರೀಧರ್ಗೌಡ, ವಿ.ಬ್ಲಾ.ಅ.ರಾಮಚಂದ್ರ, ಕುಮಾರಸ್ವಾಮಿ, ಅರ್ಜುನ್, ಚೇತನ್, ಗೌಡಪ್ಪ, ರಾಹಲ್, ಅನಿಲ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಮುಖಂಡರು ಇದ್ದರು.
ಚಿತ್ರ: ೧೭ ಡಿಹೆಚ್ಎಲ್ ಪಿ೨
ಕೊಯಿರ ಗ್ರಾಮದಲ್ಲಿ ಕೊಯಿರ ಗ್ರಾಪಂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಬಯಪ್ಪ ನೂತನ ಅಧ್ಯಕ್ಷರು ಮತ್ತು ನಿರ್ದೇಶಕರುಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಬೃಹತ್ ಹಾರವನ್ನು ಹಾಕುವುದರ ಮೂಲಕ ಬಯಪ್ಪ ಅಧ್ಯಕ್ಷ ವಿ.ಶಾಂತಕುಮಾರ್ ಹಾಗೂ ನಿರ್ದೇಶಕರಿಗೆ ಅಭಿನಂದಿಸುತ್ತಿರುವುದು.