ಅಟಲ್ ಭೂಜಲ ಯೋಜನೆ ಮಾಹಿತಿ ಕಾರ್ಯಾಗಾರದಲ್ಲಿ ರಾಜ್ಯ ಸಂಯೋಜಕಿ ಶರಣ್ಯ ಹೇಳಿಕೆ
ಪ್ರತಿನೀಧಿ ವರದಿ ದೇವನಹಳ್ಳಿ
ಜಲ ಸಂರಕ್ಷಣೆ ಮಾಡಿದಾಗ ಮಾತ್ರ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಅಟಲ್ ಭೂ ಜಲಯೋಜನೆ ಕಾರ್ಯಕ್ರಮದ ರಾಜ್ಯ ಸಂಯೋಜಕಿ ಶರಣ್ಯ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಜಲಶಕ್ತಿ ಸಚಿವಾಲಯದ ಜಲ ಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂರಕ್ಷಣ ಇಲಾಖೆ ಆಯೋಜಿಸಿದ್ದ ಅಟಲ್ ಭೂಜಲ ಯೋಜನೆ ಮಾಹಿತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಸಮುದಾಯ ಸಹಭಾಗಿತ್ವದಲ್ಲಿ ಅಂತರ್ಜಲ ನಿರ್ವಹಣಾ ಯೋಜನೆ, ಹರಿಯುವ ನೀರನ್ನು ನಿಲ್ಲಿಸಿ ನಿಂತ ನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸಿ ರೈತರ ಬದುಕು ಹಸನುರ್ಗಿಕ ಸಂಪನ್ಮೂಲವನ್ನು ಸರಿಯಾದ ರೀತಿ ಸಂರಕ್ಷಿಸುವ ಕೆಲಸ ಉತ್ತಮವಾಗಿ ನಿರ್ವಹಣೆ ಗೊಳಿಸುವ ಉದ್ದೇಶವನ್ನು ಈ ಯೋಜನೆಯಲ್ಲಿ ನೀರು ಸದ್ಬಳಕೆ ಮಾಡಿಕೊಳ್ಳಬೇಕಾದರೆ ಸೂಕ್ತ ಕ್ರಮಗಳ ಅನುಸರಣೆ ಮಾಡುವುದು ಅತ್ಯಗತ್ಯ ಎಂದು ಮಾಹಿತಿ ಹೊಂದಿದೆ.
ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಎನ್.ರಮೇಶ್, ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರನ್ನು ಮಿತವಾಗಿ ಆಗತ್ಯಕ್ಕೆ ತಕ್ಕಂತೆ ಬಳಸಬೇಕು. ಭೂಮಿಯ 3/4 ಭಾಗ ನೀರಿನಿಂದ ನೀರು ಆವರಿಸಿದೆ. ಜೂ.10ರಂದು ಕೇಂದ್ರದಿಂದ ಜಲಶಕ್ತಿ ಉಪನಿರ್ದೇಶಕರು, ವಿಶ್ವಬ್ಯಾಂಕ್ ತಂಡ ಆಗಮಿಸಲಿದ್ದು, ಅಂತರ್ಜಲ ಮಟ್ಟ ಮತ್ತು ಅಟಲ್ ಭೂಜಲ ಯೋಜನೆಯ ಅನುಷ್ಠಾನದ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ. ಪ್ರತಿಯೊಬ್ಬರು ಭಾಗವಹಿಸಿ ಈ ಯೋಜನೆಯ ಅನುಷ್ಠಾನಕ್ಕೆ ಕೈ ಜೋಡಿಸುವಂತಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ಪಿಡಿಒ ದಿಲೀಪ್ ಕುಮಾರ್, ಸದಸ್ಯ ಕೆಂಪಣ್ಣ ಆಟಲ್ ಭೂಜಲ ಯೋಜನೆ ರಾಜ್ಯ ಕಾರ ಕ್ರಮ ಘಟಕದ ಕಿರಣ್, ಐಇಸಿ ತಜ್ಞ ಮೋಹನ್, ಆಯೋಜಕ ಡಿಐಪಿ ಮಹಾತ್ಮ ಗಾಂಧಿ ಟ್ರಸ್ಟ್ ಮೈಸೂರು ಸಂಯೋಜಕ ಮಹದೇವಸ್ವಾಮಿ, ಶಾಲಾ ಮುಖ್ಯ ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಇದ್ದರು.
7ಡಿಎಚ್ಎಲ್ ಪಿ-೩
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಜಲಶಕ್ತಿ ಸಚಿವಾಲಯದ ಜಲ ಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂರಕ್ಷಣ ಇಲಾಖೆ ಆಯೋಜಿಸಿದ್ದ ಅಟಲ್ ಭೂಜಲ ಯೋಜನೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.