ಪ್ರತಿನಿಧಿ ವರದಿ ಕೆ.ಆರ್.ಪೇಟೆ
ತಾಲೂಕಿನ ಕಾಪನಹಳ್ಳಿಯ ಗಜರಾಜಗಿರಿಯ ತಪ್ಪಲಿನಲ್ಲಿ ಪ್ರಕೃತಿಯ ರಮ್ಯ ತಾಣದಲ್ಲಿರುವ ಗವಿಮಠ ಸುಕ್ಷೇತ್ರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಪವಾಡ ಪುರುಷರಾದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು ಜೀವಂತವಾಗಿ ಐಕ್ಯವಾಗಿರುವ ಗದ್ದಿಗೆಯಿರುವ ಶ್ರೀ ಮಠದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು, ಅಭಿಷೇಕ, ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಕ್ತಾಧಿಗಳು ಸುಕ್ಷೇತ್ರದಲ್ಲಿ ನಡೆಯುತ್ತಿರುವ ಗುರುಪೂರ್ಣಿಮಾ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರುವಿನ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ಮನವಿ ಮಾಡಿದರು.