ಮೈಸೂರು:
ನಗರದ ಲಯನ್ಸ್ ಕ್ಲಬ್ ಮೈಸೂರು ವಿಶ್ವಮಾನವ ಕುವೆಂಪು ಸಂಸ್ಥೆ ವತಿಯಿಂದ ತಿಲಕ್ ನಗರದ ಅಂಧ ಮಕ್ಕಳ ಸರ್ಕಾರಿ ಶಾಲೆಗೆ ಹುಲ್ಲು ಕತ್ತರಿಸುವ ಯಂತ್ರ ನೀಡಲಾಯಿತು. ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಲಯನ್ ಸುಬ್ರಹ್ಮಣ್ಯ ಅವರ ಸ್ವಚ್ಛ ನಗರ ಅಭಿಯಾನದ ಅಂಗವಾಗಿ ಈ ಕೊಡುಗೆ ನೀಡಲಾಯಿತು. ಇದೇ ವೇಳೆ ಅಂಧಮಕ್ಕಳ ಶಾಲೆಯಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ 5000 ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಲಾಯಿತು. ಈ ವೇಳೆ ಲಯನ್ಸ್ ಕ್ಲಬ್ ಮೈಸೂರು ವಿಶ್ವಮಾನವ ಕುವೆಂಪು ಅಧ್ಯಕ್ಷ ರಮೇಶ ಕುಮಾರ್, ಕಾರ್ಯದರ್ಶಿ ನಾಗರಾಜ ಗೌಡ, ಖಜಾಂಚಿ ಶಿವಕುಮಾರ್, ವಲಯ ಅಧ್ಯಕ್ಷ ಎನ್.ಪಿ. ರಮೇಶ್, ಉಪಾಧ್ಯಕ್ಷ ಶ್ರೀಧರ್ ಮತ್ತು ಹಿರಿಯ ವಕೀಲ ಎಂ.ಆರ್. ಆನಂದ್ ಇದ್ದರು.
Leave a comment