ಮಂಡ್ಯ: ನಾಗಮಂಗಲ ಪಟ್ಟಣದ ಹೋರ ವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕಳೆದ ಒಂದು ವಾರದಿಂದ ರಾಗಿ ಖರೀದಿ ಕೇಂದ್ರದಲ್ಲಿ ಅನುಮೋದನೆಗೊಂಡ ರಾಗಿಗಳನ್ನು ತೆಗೆದುಕೊಳ್ಳದೆ ಕುಂಟುನೆಪ ಹೇಳಿರಿವ ಅಧಿಕಾರಿಗಳಿಂದ ತಾಲೂಕಿನ ವಿವಿಧ ಭಾಗಗಳಿಂದ ಬಂದಂತಹ ನೂರಾರು ಟಾಕ್ಟರ್ ಗಳ ಎ.ಪಿ.ಎಂ.ಸಿ ಆವರಣದಲ್ಲಿ ನಿಂತಿವೆ ರೈತರು ತಮ್ಮ ರಾಗಿಯನ್ನು ಯಾವಾಗ ತೆಗೆದುಕೊಳ್ಳುತ್ತಾರೆ ಎಂದು ಬಕಪಕ್ಷಿಯಂತೆ ಕಾದು ಕುಳಿತು ಸಾಕಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ, ತಾಲೂಕು ದಂಡಾಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಮತ್ತು ರಾಗಿ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ರಾಗಿ ಖರೀದಿ ಕೇಂದ್ರಕ್ಕೆ ರಾಗಿಗಳನ್ನು ತಂದಿರುವ ರೈತರು ಮಾತನಾಡಿ ಕಳೆದ ಒಂದು ವಾರದಿಂದ ನೂರಾರು ಟಾಕ್ಟರ್ ಗಳು ಎಪಿಎಂಸಿ ಆವರಣದಲ್ಲಿ ನಿಂತಿದ್ದು ರೈತರನ್ನು ಯಾರೂ ಕೂಡ ಗಮನಿಸುತ್ತಿಲ್ಲ ಪ್ರತಿದಿನ ಒಂದು ಟ್ಯಾಕ್ಟರ್ ಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳನ್ನು ಬಾಡಿಗೆ ಕಟ್ಟಬೇಕು ಖರೀದಿ ಮಾಡಿದ ರಾಗಿಗಳನ್ನು ತುಂಬಲು ಎಪಿಎಂಸಿ ಆವರಣದಲ್ಲಿ ಹತ್ತಾರು ಗೋಡನ್ ಗಳಿದ್ದರೂ ಕೂಡ ಕಡುಭ್ರಷ್ಟ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುವ ಉದ್ದೇಶದಿಂದ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮೂಲ ರೈತ ಸಂಘಟನೆಯ ಅಧ್ಯಕ್ಷ ಸುರೇಶ್ ಮಾತನಾಡಿ ಅಧಿಕಾರಿಗಳಿಗೆ ರೈತರ ಕಷ್ಟಗಳು ಅರ್ಥವಾಗುವುದಿಲ್ಲ ಎಪಿಎಂಸಿ ಆವರಣದಲ್ಲಿ ಇರುವಂತ ರಾಗಿ ಖರೀದಿ ಕೇಂದ್ರವು ಸಾಕಷ್ಟು ಅವ್ಯವಸ್ಥೆಗಳಿಂದ ತುಂಬಿದೆ ಕಳೆದ ಒಂದು ವಾರದಿಂದ ನೂರಾರು ಡಾಕ್ಟರ್ ಗಳು ಸ್ಥಳದಲ್ಲಿ ನಿಂತಿದ್ದು ಕಿಂಚಿತ್ತು ರೈತರ ಬಗ್ಗೆ ಕನಿಕರ ತೋರದೆ ದುರಹಂಕಾರದ ವರ್ತನೆ ತೋರಿದ್ದಾರೆ ಗೋಡನ್ಗಳ್ಳಲ್ಲಿ ಇರಬೇಕಾದ ಖರೀದಿ ರಾಗಿಗಳನ್ನು ಬಯಲು ಶೆಡ್ ಗಳಲ್ಲಿ ಇಟ್ಟಿದ್ದಾರೆ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಹಾಗೂ ಕೃಷಿ ಸಚಿವರು ರೈತರ ಧ್ವನಿಯಾಗಿ ನಿಲ್ಲಬೇಕೆಂದು ಸೂಚಿಸಿದರು.