ಶಾಸಕ ಎಚ್.ಸಿ.ಬಾಲಕೃಷ್ಣ ತೀರುಗೇಟು
ಪ್ರತಿನಿಧಿ ವರದಿ ಮಾಗಡಿ
10 ತಿಂಗಳಲ್ಲಿ ರಾಜ್ಯ ಸರ್ಕಾರ ತೆಗೆಯುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನ್ನು ಕೊಟ್ಟಿದ್ದಾರಂತೆ ಯಾವ ರೀತಿ ತೆಗೆಯುತ್ತಾರೆ ನಮಗೆ ಗೊತ್ತಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.
ತಾಲೂಕಿನ ಶ್ರೀಗಿರಿಪುರ ಗ್ರಾಪಂ ವ್ಯಾಪ್ತಿಯಲ್ಲಿ 5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸಚಿವ ಅಮಿಶಾ ಅದೇಶದಂತೆ 10 ತಿಂಗಳಲ್ಲಿ ರಾಜ್ಯ ಸರ್ಕಾರ ತೆಗೆಯುವುದಾಗಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರದ ನಾಯಕರಿಗೆ ಮಾತನ್ನು ಕೊಟ್ಟಿದ್ದಾರೆ ಅದು ಯಾವ ರೀತಿ ತೆಗೆಯುತ್ತಾರೆ ಗೊತ್ತಿಲ್ಲ ಎಂದರು.
ಸರ್ಕಾರ ಉರುಳಿಸಲು ನಿರಂತರವಾಗಿ ಷಡ್ಯಂತ್ರ ನಡೆಯುತ್ತಿದೆ. ಈಗಾಗಲೇ ಹಲವಾರು ಶಾಸಕರನ್ನು ಭೇಟಿ ಮಾಡಿ ಕೋಟಿಗಟ್ಟಲೆ ಹಣ ಹಾಗೂ ಮಂತ್ರಿಗಿರಿ ಆಮೀಷ ಎಲ್ಲವನ್ನೂ ಕೊಡುತ್ತಿದ್ದಾರೆ. ಯಾರ, ಯಾರ ಬಳಿ ಮಾತನಾಡಿದರು ಎಂದು ಶಾಸಕರೆ ಎಲ್ಲೆಡೆ ಚರ್ಚೆ ಮಾಡುತ್ತಿದ್ದಾರೆ. ಯಾವ ಶಾಸಕರಿಗೆ ಯಾರು ಆಮಿಷಾ ಹೊಡ್ಡುತ್ತಿದ್ದಾರೆ ಎಂದು ಆ ಶಾಸಕರುಗಳೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗಳ ಬಳಿ ಮಾತನಾಡುತ್ತಿದ್ದಾರೆ. ಅವರು ಏನೆ ಆಸೆ ಇಟ್ಟುಕೊಂಡಿದ್ದರು ಮಾಡಲು ಸಾಧ್ಯವಿಲ್ಲ ಎಂದರು.
ನಮ್ಮ ಸರ್ಕಾರ ಸ್ಥಿರವಾಗಿದ್ದು, ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ನುಡಿದಂತೆ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಜನರು ಸಂತೋಷದಿಂದ ಇದ್ದಾರೆ. ರಾಜ್ಯದಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಿ ರೈತರು ಖುಷಿಯಾಗಿದ್ದಾರೆ. ಇಂಥಹ ವೇಳೆ ಸರ್ಕಾರ ತೆಗೆಯಲು ಮುಂದಾಗಿರುವುದಕ್ಕೆ ಅರ್ಥವೆ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದ ರಾಜ್ಯಪಾಲರು ರಾಜ್ಯಪಾಲರಲ್ಲ ಅವರು ಬಿಜೆಪಿಯ ಏಜೆಂಟರಂತೆ ಕೆಲಸಮಾಡುತ್ತಿದ್ದಾರೆ. ರಾಜ್ಯಪಾಲರು ಸಂವಿಧಾನ ರಕ್ಷಣೆ ಮಾಡುವ ರೀತಿ ಕೆಲಸ ಮಾಡಬೇಕು. ಯಾವುದೋ ಒಂದು ಪಕ್ಷವನ್ನು ರಕ್ಷಣೆ ಮಾಡುವ ರೀತಿ ಕೆಲಸ ಮಾಡಬಾರದು. ಮುಂದೆ ಇದೇ ರೀತಿ ಮಾಡಿದರೆ ರಾಜ್ಯಪಾಲರ ಹಠಾವೋ ಕರ್ನಾಟಕ ಬಚಾವೋ ಎಂಬ ಆಂದೋಲವನ್ನು ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಕಾರಿಯಾಗಿ ನಾನು ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅರವಿಂದ್ ಬೆಲ್ಲದ್ ಅಂದುಕೊಂಡಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಯಾವ ರೀತಿ ಮಾತನಾಡಬೇಕು ಎಂದು ವಿರೋಧ ಪಕ್ಷದ ನಾಯಕನಾಗಿ ತಿಳಿದುಕೊಳ್ಳಬೇಕು. ಅವರ ಭಾಷೆ ಮಾತನಾಡಲು ನಮಗೂ ಬರುತ್ತದೆ. ಬೆಲ್ಲದ್ ಅವರ ತಂದೆ ಸಂಪಾದನೆ ಮಾಡಿದನೆ ಮಾಡಿದ ಹಣದಿಂದ ಬೆಲ್ಲದ್ ಕೆಲಸ ಮಾಡುತ್ತಿಲ್ಲ. ಎಲ್ಲವನ್ನೂ ತೆರಿಗೆ ಹಣದಿಂದ ಮಾಡುತ್ತಿರುವುದು ಅವರು ಗೌರವಯುತವಾಗಿ ಮಾತನಾಡಬೇಕು. ವ್ಯಕ್ತಿ ಬಗ್ಗೆ ಮಾತನಾಡಬೇಕಾದರೆ ಅವ್ವ, ಅಪ್ಪಂದ ಎಂದು ಮಾತನಾಡುವುದನ್ನು ಬೆಲ್ಲದ್ ಬಿಡಬೇಕು ಎಂದರು.
ಶ್ರೀಗಿರಿಪುರಕ್ಕೆ ಕೆಪಿಎಸ್ ಸಿ ಶಾಲೆ ಮಂಜೂರಾಗಿ 4 ಕೋಟಿ ರೂ. ಹಣ ಮಂಜೂರಾಗಿದೆ. ಸಿಎಸ್ಆರ್ ಅನುದಾನಡದಿ ಮಾಡಲಾಗುವುದು. 10 ಕೋಟಿ ರೂ. ವೆಚ್ಚದಲ್ಲಿ ಕುದೂರು ಶಿವಗಂಗೆ ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಟೆಂಡರು ಹಂತದಲ್ಲಿದ್ದು ಶೀಘ್ರವೇ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವುದಾಗಿ ತಿಳಿಸಿದರು.
ಜನರು ಗೆಯುವ ಎತ್ತುಗಳಿಗೆ ಹುಲ್ಲು ಹಾಕಿ, ಕಳ್ಳ ಎತ್ತುಗಳಿಗೆ ಹುಲ್ಲುಹಾಕಬೇಡಿ. ಡಿ.ಕೆ.ಸುರೇಶ್ ಈ ಭಾರಿಯೂ ಗೆದ್ದಿದ್ರೆ ಮತಷ್ಟು ಅಭಿವೃದ್ಧಿ ಮಾಡಲು ದೊಡ್ಡಶಕ್ತಿ ಬರುತ್ತಿತ್ತು ಡಿಕೆ. ಸುರೇಶ್ ಸೋತಿದ್ದರು ನಮ್ಮ ಬೆನ್ನಹಿಂದೆ ನಿಂತುಎಲ್ಲಾ ಅಭಿವೃದ್ಧಿ ಗೆ ಕೈಜೋಡಿಸಿದ್ದಾರೆ ಎಂದರು.
ಶ್ರೀಗಿರಿಪುರ ಗ್ರಾಪಂ ಅಧ್ಯಕ್ಷ ಡಿ.ಸಿ.ಲಕ್ಷ್ಮಿ ಜಯರಾಮು, ಮಾಜಿ ಅಧ್ಯಕ್ಷ ಪ್ರಕಾಶ್, ಸಿದ್ದ ಲಿಂಗಪ್ಪ, ಗುತ್ತಿಗೆದಾರ ದೀಪು, ಹುಲಿಕಲ್ಲು ವಿಎಸ್ಎಸ್ಎನ್ ದೇವರಾಜು, ಮೈಕೋ ರಾಜಣ್ಣ, ಹೊನ್ನಪ್ಪ, ಇಓ ಜಯಪಾಲು, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಗಂಗಾಧರ್, ಪಿಡಿಓ ಬಸವರಾಜು ಇತರರು ಇದ್ದರು.
ಪೋಟೋ: ಶಾಸಕ ಎಚ್.ಸಿ. ಬಾಲಕೃಷ್ಣ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.