ನೇಹಾ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ
ಪ್ರತಿನಿಧಿ ವರದಿ ಚಾಮರಾಜನಗರ
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಅಖಿಲ ಭಾರತ ವೀಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯಿತ ಸಂಘಸಂಸ್ಥೆಗಳ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇಗುಲದ ಎದುರು ನಗರದ ಶ್ರೀ ವಿರಕ್ತ ಮಠದ ಶ್ರೀ ಚನ್ನಬಸ ವ ಸ್ವಾಮೀಜಿ, ಮರಿಯಾಲ ಮಠದ ಶ್ರೀ ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಹರವೆ ಮಠದ ಶ್ರೀ ಸರ್ಪ ಭೂಷಣ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತ ತಲುಪಿ ಅಲ್ಲಿ ಕೆಲ ಕಾಲ ರಸ್ತೆಯಲ್ಲಿ ಸಂಚಾರ ತಡೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಡಳಿತ ಭವನದ ಮುಖ್ಯದ್ವಾರ ತಲುಪಿದರು.
ರಾಜ್ಯದಲ್ಲಿ ಇಂತಹ ಕೃತ್ಯ ಯಾವತ್ತು ನಡೆದಿರ ಲಿಲ್ಲ. ಆದರೆ ಜಿಹಾದಿ ಮನಸ್ಥಿತಿಯ ಫಯಾಜ್ ನೇಹಾ ಅವರನ್ನು ಹತ್ಯೆ ಮಾಡಿರುವುದು ಸಮಾಜ ವೇ ಬೆಚ್ಚಿ ಬೀಳುವಂತಹ ಘಟನೆಯಾಗಿದೆ. ಇಂತ ಹ ಘಟನೆ ನಡೆದಿದ್ದರೂ ಸರ್ಕಾರ ಹತ್ಯೆಯಾದ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ, ಅವರಿಗೆ ಸಾಂತ್ವಾನ ಹೇಳುವ ಕೆಲಸವನ್ನು ಮಾಡಿಲ್ಲ. ಇಂತಹ ಕೃತ್ಯ ಎಸಗಿರುವ ಫಯಾಜ್ ನನ್ನು ಗಲ್ಲಿಗೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆ ಯದಂತೆ ಸರ್ಕಾರ ಅಗತ್ಯ ಕ್ರಮವಹಿಸಬೇಕು. ಸಮಾಜ ದ ಎಲ್ಲ ವರ್ಗದ ಮಹಿಳೆಯರಿಗೂ ರಕ್ಷಣೆ ಕೊಡು ವಂತಹ ಕಾನೂನನ್ನು ಜಾರಿಗೊ ಳಿಸಬೇಕು ಎಂದು ಸರ್ಕಾರವನ್ನು ಪ್ರತಿಭಟನಾ ಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದತ್ತ ಬರುತ್ತಿದ್ದಂತೆ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿ ಜಿಲ್ಲಾಡಳಿತ ಭವನದ ಮುಖ್ಯ ದ್ವಾರವನ್ನು ಬಂದ್ ಮಾಡಿದರು. ಮನವಿ ಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರು ಸ್ಥಳಕ್ಕೆ ಆಗ ಮಿಸಬೇಕು ಎಂದು ಪ್ರತಿಭಟನಾ ಕಾರರು ಪಟ್ಟು ಹಿಡಿದರು. ಆಗ ಎಎಸ್ಪಿ ಉದೇಶ್ ಅವರು ಆಗಮಿಸಿ ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರು ಚುನಾವಣಾ ಅಧಿಕಾರಿಗ ಳಾಗಿದ್ದಾರೆ. ಹೀಗಾಗಿ ಮನವಿ ಪತ್ರವನ್ನು ತಹಸೀಲ್ದಾರ್ ಬಸವರಾಜ್ ಅವರಿಗೆ ನೀಡುವಂತೆ ಪ್ರತಿಭ ಟನಾಕಾರರ ಮನವೊಲಿಸಿದರು. ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮ ಹಾ ಸಭಾದ ಮುಖಂಡರು ಹಾಗೂ ಸಾರ್ವಜನಿಕ ರು ಇದ್ದರು.
24ಸಿಎಚ್ಎನ್.2: ಹುಬ್ಬಳ್ಳಿಯ ನೇಹಾ ಹಿರೇಮ ಠ ಹತ್ಯೆ ಖಂಡಿಸಿ ಅಖಿಲ ಭಾರತ ವೀಶೈವ ಮಹಾ ಸಭಾ ಹಾಗೂ ವೀರಶೈವ ಲಿಂಗಾಯಿತ ಸಂಘಸಂ ಸ್ಥೆಗಳ ವತಿಯಿಂದ ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.