ಜ್ವರವಿದ್ದರೆ ನಿರ್ಲಕ್ಷ್ಯ ಮಾಡದೇ ತಪಾಸಣೆ ಮಾಡಿಸಿಕೊಳ್ಳಿ
*ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಕಾಶ್ ಸಲಹೆ
ಚಿಕ್ಕನೇರಳೆಯಲ್ಲಿ ಡೆಂಘೆ ಅರಿವು ಕಾರ್ಯಕ್ರಮ
ಬೆಟ್ಟದಪುರ: ಯಾವುದೇ ಜ್ವರ ಸೇರಿದಂತೆ ಆರೋಗ್ಯ ಸಮಸ್ಯೆ ಇದ್ದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಕಾಶ್ ಸಲಹೆ ಹೇಳಿದರು.
ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿ ಇತ್ತೀಚೆಗೆ ಆರೋಗ್ಯ ಇಲಾಖೆಯಿಂದ ನಡೆದ ರಾಷ್ಟ್ರೀಯ ಡೆಂಘೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳ ಉತ್ಪತಿ ಹೆಚ್ಚಾಗುತ್ತದೆ. ಅಲ್ಲದೆ ಮನೆ ಆವರಣದಲ್ಲಿ ಯಾವುದೇ ಸ್ಥಳದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವಾರಕ್ಕೆ ಎರಡು ಬಾರಿ ಮನೆಯಲ್ಲಿ ಇರುವಂತ ಪಾತ್ರೆಗಳನ್ನು ತೊಳೆಯಬೇಕು. ಇನ್ನಾ ವಾಸಿಸುವಂತಹ ಸ್ಥಳದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸೊಳ್ಳೆಗಳ ಸಂತಾನ ಉತ್ಪತಿಯನ್ನು ಕಡಿಮೆ ಮಾಡುವುದರಿಂದ ಮಾತ್ರ ಡೆಂಘೆ ಸೇರಿದಂತೆ ಸೊಳ್ಳೆಯಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ನೀರಿನ ಟ್ಯಾಂಕ್ ಸ್ವಚ್ಛತೆ ಸೇರಿದಂತೆ ನೈರ್ಮಲ್ಯತೆ ಕಾಪಾಡುವ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರ ಡಾ.ಬಿ.ಎಂ ಸತೀಶ, ಆರೋಗ್ಯ ನೀರಿಕ್ಷಕ ಮುಜೀಬ್, ಆರೋಗ್ಯ ಸುರಕ್ಷಾಣಾಧಿಕಾರಿ ಉದಯಕುಮಾರಿ, ರಾಧಮಣಿ ಇದ್ದರು.
18ಬಿಟಿಪಿ01: ರಾಷ್ಟ್ರೀಯ ಡೆಂಘೆ ದಿನದ ಹಿನ್ನಲೆ ಚಿಕ್ಕನೇರಳೆ ಗ್ರಾಮದ ಕೆರೆಗೆ ಗಪ್ಪಿ ಹಾಗೂ ಗ್ಯಾಂಬುಝೀಯ ಮೀನುಗಳನ್ನು ಬಿಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಪ್ರಕಾಶ್, ಡಾ.ಬಿ.ಎಂ ಸತೀಶ, ಮುಜೀಬ್, ಉದಯಕುಮಾರಿ, ರಾಧಮಣಿ ಇದ್ದರು.