ಮೈಸೂರು : ಮೈಸೂರು ನಗರ ಪಾಲಿಕೆಗೆ ಐಗಾಟ್ ಕರ್ಮಯೋಗಿ ತರಬೇತಿ ಪ್ರಶಸ್ತಿ ಪಡೆದಿದೆ. ದೆಹಲಿಯಲ್ಲಿ ಜರುಗಿದ ಸಭೆಯಲ್ಲಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರಿದಾಸ್ ಪುರಿ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್, ಉಪ ಆಯುಕ್ತ ಸೋಮಶೇಖರ್ ಭಾಗವಹಿಸಿದ್ದರು. ದೇಶದ 4,950 ನಗರಸಭೆ, ನಗರ ಪಾಲಿಕೆಗಳ ಪೈಕಿ ಕೇವಲ 6 ನಗರ ಸಂಸ್ಥೆಗಳು ಆಯ್ಕೆ ಆಗಿದ್ದು, ಮೈಸೂರು ಇದರಲ್ಲಿ 3ನೇ ಸ್ಥಾನ ಪಡೆದಿದೆ.