ಮಂಡ್ಯ: ಮಂಡ್ಯ ಸಂಜಯ್ ಸರ್ಕಲ್ ಬಳಿ ಬೆಳ್ಳಂಬೆಳಗ್ಗೆಯೇ ಹೊಟ್ಟೆಗೆ ಗುಂಡಿಳಿಸಿ ತೂರಾಡುತ್ತಾ ಅಲೆದಾಡುತ್ತಿರುವ ಮಹಿಳೆ ಬೀದಿಯಲ್ಲಿ ರಂಪಾಟ ನಡೆಸಿದ್ದಾಳೆ. ಕುಡಿತ ಒಬ್ಬ ವ್ಯಕ್ತಿಯ-ಪುರುಷನಾಗಿರಲಿ ಅಥಾವ ಮಹಿಳೆ, ಅವರ ವೈಯಕ್ತಿಕ ವಿಚಾರ, ನಾವು ಪ್ರಶ್ನಿಸುವಂತಿಲ್ಲ; ಅದು ಬೇರೆ ವಿಚಾರ. ಆದರೆ ಮಹಿಳೆಯೊಬ್ಬಳು ಕಂಠಮಟ್ಟ ಕುಡಿದು ಹೀಗೆ ಸಾರ್ವಜನಿಕವಾಗಿ ಸೀನ್ ಸೃಷ್ಟಿಸುವುದು ಸರಿಯಲ್ಲ. ಆಕೆಯ ಬದಲು ಒಬ್ಬ ಪುರುಷನಾಗಿದ್ದರೆ ಅದನ್ನು ಸುದ್ದಿ ಮಾಡುವ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಅಂಥ ದೃಶ್ಯಗಳನ್ನು ನಾವು ಹೆಚ್ಚುಕಡಿಮೆ ಪ್ರತಿನಿತ್ಯ ನೋಡುತ್ತೇವೆ. ಈಕೆ ರಸ್ತೆಯಲ್ಲಿ ಓಡಾಡುವ ಜನರಿಗೆ ಬೈದಾಡಿದ್ದಾಳೆ, ಅಂಗಡಿಗಳ ಮುಂದೆ ನಿಂತು ವ್ಯಾಪಾರಸ್ಥರಿಗೆ ಮತ್ತು ಅವರ ಗ್ರಾಹಕರಿಗೆ ತೊಂದರೆ ಮಾಡಿದ್ದಾಳೆ . ಆಕೆಯ ವರ್ತನೆಯಿಂದ ಬೇಸತ್ತ ಜನ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಹಿಳಾ ಕಾನ್ ಸ್ಟೇಬಲ್ ಗಳು ಮಂಡ್ಯದ ಮಾಲಾಶ್ರೀಯನ್ನು ಸ್ಟೇಶನ್ ಕರೆದೊಯ್ದಿದ್ದಾರೆ.