ನೇಣು ಬಿಗಿದುಕೊಂಡು 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕುಶಾಲ್ (11) ಮೃತ ಬಾಲಕ. ಮೈಸೂರಿನ ಜಲಪುರಿಯಲ್ಲಿರುವ ಪೊಲೀಸರ ವಸತಿ ಗೃಹದಲ್ಲಿ ಘಟನೆ ಜರುಗಿದ್ದು, ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರೂಮ್ತಾ ಲಾಕ್ ಮಾಡಿ ತಾಯಿಯ ದುಪ್ಪಟ್ಟಾದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸ್ ಪೇದೆ ದೇಸಿಗೌಡ, ಲಕ್ಷ್ಮಿ ದಂಪತಿ ಪುತ್ರ ಕುಶಾಲ್ ಆತ್ಮಹತ್ಯೆಗೆ ಶರಣಾಗಿರುವ ಬಾಲಕ. ಉತ್ತಮ ವ್ಯಾಸಂಗಕ್ಕಾಗಿ ಬಾಲಕನನ್ನು ಹಾಸ್ಟೇಲ್ ಗೆ ಸೇರಿಸುವ ಚಿಂತನೆ ಮನೆಯಲ್ಲಿ ಇತ್ತು ಎನ್ನಲಾಗಿದ್ದು, ಇದರ ಮನನೊಂದ ಕುಶಾಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.