ಪ್ರತಿನಿಧಿ ವರದಿ ಮದ್ದೂರು
ದೇವಾಲಯಗಳು ಮಾನಸಿಕವಾಗಿ ನೆಮ್ಮದಿ ಕೇಂದ್ರಗಳು, ದೇವರನ್ನು ಪೂಜಿಸುವುದರಿಂದ ನಾಗರಿಕರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಇತ್ತೀಚೆಗೆ ಮಾಸ್ತಮ್ಮ ದೇವರ ಅನ್ನದಾಸೋಹ ಭವನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಾಲಯಗಳು ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಾಗಿ ಮಾರ್ಪಟ್ಟು ನಾಗರಿಕರು ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ಮಾಡಲು ಹಾಗೂ ಭಕ್ತಿ ಮಾರ್ಗದ ಮೂಲಕ ನೆಮ್ಮದಿ ಕಂಡುಕೊಳ್ಳುವ ತಾಣಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಸಂಸದೆ ಸುಮಲತಾ ಅಂಬರೀಷ್ ಉದ್ಘಾಟಿಸಿದರು. ಮಾಸ್ತಮ್ಮ ದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ದೊಣ್ಣೇಗೌಡ, ಖಜಾಂಚಿ ಟಿ.ನಾರಾಯಣ, ಉಪಾಧ್ಯಕ್ಷ ಬಿ.ರಮೇಶ್, ಅನ್ನದಾಸೋಹ ಭವನಕ್ಕೆ ಸ್ಥಳವನ್ನು ಕೊಡುಗೆ ನೀಡಿದ ಜಯಂತಿ ಶಂಕರ್ ಮಕ್ಕಳು, ಮುಖಂಡರಾದ ಶ್ರೀನಿವಾಸ್, ಜಗದೀಶ್, ವಿಶ್ವಾಸ್, ಚಿಕ್ಕವೆಂಕಟೇಗೌಡ, ಪಾಪಣ್ಣ ಇದ್ದರು.
ಪೋಟೋ
ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದ ಮಾಸ್ತಮ್ಮ ದೇವರ ಅನ್ನದಾಸೋಹ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಟ್ರಸ್ಟ್ ವತಿಯಿಂದ ಶಾಸಕ ಕೆ.ಎಂ.ಉದಯ್, ಮನ್ಮುಲ್ ನಾಮ ನಿರ್ದೇಶಿತ ನಿರ್ದೇಶಕ ಕದಲೂರು ರಾಮಕೃಷ್ಣ, ಜಿ.ಪಂ ಮಾಜಿ ಸದಸ್ಯ ರಾಜೀವ್ ಅವರನ್ನು ಸನ್ಮಾನಿಸಲಾಯಿತು. ದೊಣ್ಣೇಗೌಡ, ಟಿ.ನಾರಾಯಣ, ಬಿ.ರಮೇಶ್, ಶ್ರೀನಿವಾಸ್, ಜಗದೀಶ್, ವಿಶ್ವಾಸ್, ಚಿಕ್ಕವೆಂಕಟೇಗೌಡ, ಪಾಪಣ್ಣ, ಅಡ್ಡರಸ್ತೆ ಗೋಪಿ ಇದ್ದರು.
————–