ಪ್ರತಿನಿಧಿ ವರದಿ ಪಾಲಂಗಾಲ
ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಕರಿನೆರವಂಡ ಕುಟುಂಬಸ್ಥರ ಗುರುಮಠಕ್ಕೆ ಸಂಪರ್ಕ ಕಲ್ಪಿಸುವ 95 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಈ ಸಂದರ್ಭ ಕೆದಮುಳ್ಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಡಿಕೇರಿಯಂಡ ಎಸ್ ಮಹೇಶ್, ಗ್ರಾಪಂ ಅಧ್ಯಕ್ಷ ಮಾಳೇಟಿರ ಜಫ್ರೀ ಉತ್ತಪ್ಪ, ತಾಪಂ ಕೆಡಿಪಿ ಸದಸ್ಯ ಮಾಳೇಟಿರ ಎನ್ ಪ್ರಶಾಂತ್ ಉತ್ತಪ್ಪ, ಕೆಪಿಸಿಸಿ ಸಾಮಾಜಿಕ ಮಾಧ್ಯಮದ ಸಹ ಸಂಚಾಲಕ ಐ.ಜಿ.ಚಿಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಗುತ್ತಿಗೆದಾರ ರಂಜಿ ಮಾದಪ್ಪ ಇದ್ದರು.
ಫೋಟೋ 18 ಎಂಡಿಕೆ 03 ; ಪಾಲಂಗಾಲ ಗ್ರಾಮದ ಕರಿನೆರವಂಡ ಕುಟುಂಬಸ್ಥರ ಗುರುಮಠ ರಸ್ತೆಯನ್ನು ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.