ಮೈಸೂರು: ಸಮರ್ಥನ ಅಂಗವಿಕಲರ ಸಂಸ್ಥೆಯಿಂದ ಸಾಯಿರಂಗ ವಿದ್ಯಾಸಂಸ್ಥೆಯ ಕಿವುಡು ಗಂಡು ಮಕ್ಕಳ ವಸತಿ ಶಾಲೆಯಲ್ಲಿ ಸೆ.12ರಂದು ಸೈನ್ಸ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 2ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಂಕರ ಗೌಡ ಪಾಟೀಲ್, ಸಮರ್ಥನ ಅಂಗವಿಕಲರ ಸಂಸ್ಥೆ ಮುಖ್ಯಸ್ಥ ಗುರುರಾಘವೇಂದ್ರ, ಸಾಯಿರಂಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಟರಾಜ, ದಯಾನಂದ, ಶಿವರಾಜು, ರಘುನಾಥ ಗೌಡ ಇತರರಿದ್ದರು.