ಮಹಿಳೆಯರಿಗೆ ಉಚಿತ ಬಸ್ ಸೇವೆ, ಮೆಟ್ರೋ ಫೀಡರ್ ಬಸ್ಗಳು ಸೇರಿದಂತೆ ನಗರ ರಸ್ತೆ ಸಾರಿಗೆ ಸಂಚಾರಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಆದರೂ ನಗರದಲ್ಲಿ ವಾಯು ಮಾಲಿನ್ಯ, ಟ್ರಾಫಿಕ್ ಕಡಿಮೆಯಾಗಿಲ್ಲ. ಇದೀಗ ವಾಯು ಮಾಲಿನ್ಯ ಜನರ ಜೀವಕ್ಕೆ ಕುತ್ತು ತಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏರ್ ಪೊಲ್ಯೂಷನ್ ಡಿಸಾಡರ್ (Air Polution Disarder) ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಏರ್ ಪೊಲ್ಯೂಷನ್ ಡಿಸಾಡರ್ಗೆ ಸಿಟಿ ಮಂದಿ (Bengaluru) ಬಲಿಯಾಗುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಏರ್ ಪೊಲ್ಯೂಷನ್ ಮಾರಕವಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ರಾಜೀವ ಗಾಂಧಿ ಎದೆ ರೋಗಿಗಳ ಸಂಸ್ಥೆ ಮುಂದಾಗಿದೆ.
ಬೆಂಗಳೂರಿನ ಏರ್ ಪೊಲ್ಯೂಷನ್ ಸದ್ದಿಲ್ಲದೆ ಜನರ ಜೀವಕ್ಕೆ ಕುತ್ತು ತರುತ್ತಿದೆ. ತಂಬಾಕು, ಮದ್ಯ ಸೇವನೆ ಮಾತ್ರವಲ್ಲ ಬೆಂಗಳೂರಿನ ಕಲುಷಿತ ಹವಾಮಾನ ಕೂಡ ಕ್ಯಾನ್ಸರ್, ಲಂಗ್ಸ್ ಡ್ಯಾಮೇಜ್ ನಂತಹ ರೋಗಗಳಿಗೆ ಕಾರಣವಾಗುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಏರ್ ಪೊಲ್ಯೂಷನ್ನಿಂದಾಗಿ ಹೆಚ್ಚು ಜನರು ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಟ್ರಾಫಿಕ್ನಲ್ಲಿ ನಿಂತು ನಿರಂತರ ಕೆಲಸ ನಿರ್ವಹಿಸುವ ಟ್ರಾಫಿಕ್ ಪೊಲೀಸರು, ಬಿಎಂಟಿಸಿ ಚಾಲಕ, ನಿರ್ವಾಹಕರು ಏರ್ ಪೊಲ್ಯೂಷನ್ ಡಿಸಾಡರ್ಗೆ ತುತ್ತಾಗುತ್ತಿದ್ದಾರೆ.