ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ರವೀಂದ್ರ ಅಭಿಪ್ರಾಯ
ವಿರಾಜಪೇಟೆ: ಉದ್ಯೋಗ ಗಿಟ್ಟಿಸಿಕೊಳ್ಳಲು ಕೂಡ ಪ್ರತಿನಿಧಿ ವಿದ್ಯಾಸಿರಿ ಸಂಚಿಕೆ ಪ್ರಯೋಜನಕಾರಿ ಎಂದು ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ರವೀಂದ್ರ ಹೇಳಿದರು.
ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮುದ್ರಣ, ಗುಣಮಟ್ಟ ಶ್ರೇಷ್ಠವಾಗಿದೆ. ಕೇವಲ ಶಿಕ್ಷಣ ಸಂಸ್ಥೆಗಳ ಪರಿಚಯಕ್ಕೆ ಮೀಸಲಿಡದೇ ಭವಿಷ್ಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬೇಕಾದ ಕೋರ್ಸ್ ಗಳ ಪರಿಚಯ ಮಾಡಿಕೊಡಲಾಗಿದೆ. ಎಐ ತಂತ್ರಜ್ಞಾನದ ಶಿಕ್ಷಣ ಭವಿಷ್ಯಕ್ಕೆ ಶಿಕ್ಷಣ ಎಂಬುವುದನ್ನು ಅರಿವು ಮೂಡಿಸುವ ಕಾರ್ಯ ನಡೆದಿದೆ. ನೂತನ ತಂತ್ರಜ್ಞಾನದ ಶಿಕ್ಷಣದ ಅರಿವು ಪಾಲಕರಿಗೆ ಮುಖ್ಯ. ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಯೋಗಗಳು ನಮಗೂ ದಾರಿ ದೀಪವಾಗಿದೆ ಎಂದರು.
ಲ್ಯಾಬ್ ಪದಕಷ್ಟೆ ಸೀಮಿತವಾಗಿದ್ದ ಒಂದಷ್ಟು ಹೆಸರುಗಳನ್ನು ಪಿಂಕ್ ಲ್ಯಾಬ್ ಹೆಸರಿನ ಮೂಲಕ ತಿಳಿಸುವ ಒಂದಷ್ಟು ಶಿಕ್ಷಣ ಸಂಸ್ಥೆಗಳ ಪ್ರಯತ್ನ ಮೆಚ್ಚುವಂತದ್ದು. ಸಣ್ಣ ಅಪಘಾತ ಸಂದರ್ಭವೂ ಯಾವ ರೀತಿ ಪ್ರಥಮ ಚಿಕಿತ್ಸೆ ಮಾಡಬೇಕು, ನಾವು ಯಾವ ರೀತಿ ಮುತುವರ್ಜಿ ತೋರಿಸಬೇಕು ಎಂಬುವುದು ಸಂಚಿಕೆ ಮೂಲಕ ಕಲಿಯಲು ಅವಕಾಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾರಂಭಿಕ ಹಂತದ ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲು ಸಾಕಷ್ಟು ಕಲಿಯುವ ಅನಿವಾರ್ಯತೆ ಇದೆ. ಇದೆಲ್ಲವೂ ಒಂದೇ ವೇದಿಕೆಯನ್ನು ದೊರೆಕಿದೆ. ನಾವು ಕೂಡ ನೋಡಿ ತಿಳಿಯಲು ಅವಕಾಶವಿದೆ. ಹೋಂವರ್ಕ್ ರೀತಿ ಯೋಜನೆ ರೂಪಿಸಿಕೊಳ್ಳಲು, ಕೌನ್ಸಿಲಿಂಗ್ ರೀತಿ ಸಂಚಿಕೆ ಪ್ರಯೋಜನಕಾರಿ ಎಂದು ಹೇಳಿದರು. ಈ ಸಂದರ್ಭ ಶಾಲೆಯ ಕೆ. ಎಂ. ಮೀರಾ, ಪ್ರತಿಮಾ, ವಿದ್ಯಾ ಇದ್ದರು.
ಫೋಟೋ 13 ಎಂಡಿಕೆ 02 ; ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ರವೀಂದ್ರ ಸಂಚಿಕೆ ಬಿಡುಗಡೆಗೊಳಿಸಿದರು.