ಡಿಐಜಿಪಿಯಿಂದ ಮತ ಎಣಿಕೆ ಕೇಂದ್ರ,ಭದ್ರತಾ ಕೊಠಡಿ ಪರಿಶೀಲನೆ
ಪ್ರತಿನಿಧಿ ವರದಿ ಚಾಮರಾಜನಗರ :
ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷ ಅಮಿತ್ ಸಿಂಗ್ ಅವರು ಬುಧವಾರ ನಗರದ ಹೊರ ವಲಯ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಮತ ಎಣಿಕೆ ಕೇಂದ್ರ ಹಾಗೂ ಭದ್ರತಾ ಕೊಠಡಿಗೆ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು.
ಮತ ಎಣಿಕೆ ಕೇಂದ್ರಕ್ಕೆ ಬರುವ ಅಧಿಕಾರಿಗಳು ಹಾಗೂ ನಿಗದಿ ಪಡಿಸಿರುವ ಅಭ್ಯರ್ಥಿಗಳ ಕಡೆಯವರನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಿ ಕೇಂದ್ರದೊಳಗೆ ಬಿಡಬೇಕು. ಮೊಬೈಲ್ ಫೋನ್ ಗಳನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಹೋಗುವವರ ಮೊಬೈಲ್ ಗಳನ್ನು ಸಂಗ್ರಹಿಸಿ ಒಂದು ಸ್ಥಳದಲ್ಲಿ ಇಡುವ ವ್ಯವಸ್ಥೆ ಮಾಡುವಂತೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸು
ಸಜ್ಜಿತವಾಗಿ ಮಾಡುವಂತೆ ಡಿಐಜಿಪಿ ಅವರು ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಪತ್ರಿಕೆಗೆ ತಿಳಿಸಿದರು.
ಮತ ಎಣಿಕೆ ಕೇಂದ್ರಕ್ಕೆ ತೆರಳುವ ಮುಖ್ಯ ಪ್ರವೇಶ ದ್ವಾರದಿಂದ ಚುನಾವಣಾ ಅಬ್ಸರ್ವರ್ ಗಳ ವಾಹ ನಗಳನ್ನು ಹೊರತು ಪಡಿಸಿ ಯಾವುದೇ ವಾಹನ ಗಳನ್ನು ಒಳಗೆ ಬಿಡುವ ವ್ಯವಸ್ಥೆ ಇರುವುದಿಲ್ಲ. ಅಭ್ಯರ್ಥಿಗಳ ಪರ ಬರುವಂತಹ ಪೋಲಿಂಗ್ ಏಜೆಂಟ್ ಗಳಿಗೆ ಜಿಲ್ಲಾಧಿಕಾರಿ ಅವರಿಂದ ಅನುಮತಿ ಪತ್ರ ಹಾಗೂ ಗುರುತಿನ ಚೀಟಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ಪಡೆದು, ಅದನ್ನು ಪರಿಶೀಲಿಸುತ್ತೇವೆ. ಬಳಿಕ ಗುರುತಿನ ಚೀಟಿ ಹೊಂದಿರುವ ವ್ಯಕ್ತಿಗಳನ್ನು ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪೊಲೀಸ್ ಸಿಬ್ಬಂದಿ ಬಿಡಲಿದ್ದಾರೆ ಎಂದು ತಿಳಿಸಿದರು.
29ಸಿಎಚ್ಎನ್.4: ಡಿಐಜಿಪಿ ಅಮಿತ್ ಸಿಂಗ್ ಅವರು ಚಾಮರಾಕನಗರದ ಹೊರ ವಲಯ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಮತ ಎಣಿಕೆ ಕೇಂದ್ರ ಹಾಗೂ ಭದ್ರತಾ ಕೊಠಡಿಗೆ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು.