ಪ್ರತಿನಿಧಿ ವರದಿ ಹನೂರು
ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಮೀಪದ ಓವರ್ ಹೆಡ್ ಟ್ಯಾಂಕ್, ಪಶು ಆಸ್ಪತ್ರೆ ಬಳಿಯ ಓವರ್ ಹೆಡ್ ಟ್ಯಾಂಕ್, ಹುಲುಸು ಗುಡ್ಡೆ ಕಾವೇರಿ ಕುಡಿಯುವ ನೀರಿನ ಬೃಹತ್ ನೀರಿನ ಸಂಗ್ರಹಣ ಟ್ಯಾಂಕ್ಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಪಪಂ ಮುಖ್ಯಾಧಿಕಾರಿ ಅಶೋಕ್, ಉಪಾಧ್ಯಕ್ಷ ಆನಂದ ಕುಮಾರ್, ಸದಸ್ಯ ಸೋಮಣ್ಣ, ಮುಖಂಡ ಸತೀಶ್, ರಾಜುಗೌಡ, ಮಾದೇವ್, ವಿಜಯ್ ಕುಮಾರ್, ಅಮೀನ್ ಇನ್ನಿತರರು ಇದ್ದರು.
——————————-
ಕೋಟ್
ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಸಂಗ್ರಹಣೆ ಮತ್ತು ಸರಬರಾಜು ಟ್ಯಾಂಕ್ಗಳ ಶುಚಿತ್ವಕ್ಕೆ ಎರಡು ಮೂರು ದಿನಗಳಲ್ಲಿ ಕ್ರಮ ವಹಿಸಬೇಕು. ಟ್ಯಾಂಕ್ಗಳ ಒಳ ಮತ್ತು ಹೊರಗಡೆ ಅಶುಚಿತ್ವ ತಾಂಡವಾಡದಂತೆ ಎಚ್ಚರಿಕೆ ವಹಿಸಬೇಕು. ನೀರು ಸರಬರಾಜು ಮಾಡುವ ಗೇಟ್ ವಾಲ್ ಗಳು ಭೂಮಿಯ ತಳ ಮಟ್ಟದಲ್ಲಿ ಇರುವುದರಿಂದ ಮಳೆ ಹಾಗೂ ಕೊಳಚೆ ನೀರು ಕುಡಿಯುವ ನೀರಿಗೆ ಸೇರುವ ಅಪಾಯವಿರುವುದರಿಂದ ಭೂಮಿಯ ಮೇಲ್ಮಟ್ಟದಲ್ಲಿ ಗೇಟ್ ವಾಲ್ ಗಳು ಇರುವಂತೆ ಕ್ರಮಕೈಗೊಳ್ಳಬೇಕು.
ಎಂ.ಆರ್.ಮಂಜುನಾಥ್, ಶಾಸಕ