ಪ್ರತಿನಿಧಿ ವರದಿ ಪೊನ್ನಂಪೇಟೆ
ಜ್ಯೋತಿ ಸ್ತಂಭ ನಿರ್ಮಾಣದ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಉತ್ತಮ ಮಾರ್ಗ ಎಂದು ಶಾಸಕ ಎ.ಎಸ್.ಪೊನ್ನಣ್ಣ ಅಭಿಪಾಯಪಟ್ಟರು.
ಪೊನ್ನಂಪೇಟೆ ಪಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವೇದಿಕೆ ಮನವಿ ಸ್ವೀಕರಿಸಿ ಮಾತನಾಡಿದರು.
ಭವನದ ಬದಲಾಗಿ ಜ್ಯೋತಿ ಸ್ತಂಭವನ್ನು ನಿರ್ಮಿಸುವುದು ಸೂಕ್ತ. ಜ್ಯೋತಿ ಸ್ತಂಭದ ಸುತ್ತಲೂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಬರೆದು ನಿರಂತರವಾಗಿ ಜ್ಯೋತಿ ಬೆಳಗುತ್ತಿರುವಂತೆ ನಿರ್ಮಿಸುವ ಪರಿಕಲ್ಪನೆ ಹೊಂದಲಾಗಿದೆ. ತಾಲೂಕಿನಲ್ಲಿ ತಾಲೂಕು ಕಚೇರಿ ಹಾಗೂ ಮಿನಿ ವಿಧಾನಸೌಧವನ್ನು ನಿರ್ಮಿಸುವ ಪರಿಕಲ್ಪನೆ ಹೊಂದಿದ್ದು, ಅದರ ರೂಪುರೇಷೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯ ಭರವಸೆಯೂ ದೊರೆತಿದೆ. ಈ ಕಟ್ಟಡಗಳ ಜತೆಗೆ ಉತ್ತಮವಾದ ಸ್ಥಳ ಗುರುತಿಸಿ ಅಲ್ಲಿ ಜ್ಯೋತಿ ಸ್ತಂಭವನ್ನು ನಿರ್ಮಿಸಿ, ಹೋರಾಟಗಾರರ ಸ್ಮರಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಹಿರಿಯರಾದ ಎಂ.ಎಸ್.ಕುಶಾಲಪ್ಪ ಮಾತನಾಡಿ, ತಾಲೂಕಿನ ಕ್ಗ್ಗಟ್ನಾಡ್ ಆಡಳಿತ ವ್ಯವಸ್ಥೆಗೆ ಒಳಪಡುವ ಭೂಮಿಯಲ್ಲಿ ಸ್ಮಾರಕ ಭವನ ನಿರ್ಮಿಸುವುದು. ಈ ಹಿಂದೆ ತಾಲೂಕಿನಲ್ಲಿ ನ್ಯಾಯಾಲಯ ನಿರ್ಮಿಸಲು ಸರ್ಕಾರದ ಅನುದಾನದೊಂದಿಗೆ ಉಳಿದ ಹಣವನ್ನು ಗ್ರಾಮಸ್ಥರಿಂದ ಪಡೆದು ನಿರ್ಮಿಸಿದ್ದನ್ನು ನೆನಪಿಸಿ, ಸ್ಮಾರಕ ಭವನ ನಿರ್ಮಿಸಲು ಅನುದಾನ ಕೊಡಿಸುವಂತೆ ಮನವಿ ಮಾಡಿದರು.
ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ಎರ್ಮು ಹಾಜಿ ಮಾತನಾಡಿ, ಪೊನ್ನಂಪೇಟೆಯಲ್ಲಿ ಸ್ಮಾರಕ ಭವನ ನಿರ್ಮಿಸಲು ಈಗಾಗಲೇ ಗುರುತಿಸಿಲಾಗಿರುವ 10 ಸೆಂಟು ಜಾಗವನ್ನು ಮಂಜೂರು ಮಾಡಿದರೆ. ಸ್ಮಾರಕ ಭವನ ನಿರ್ಮಿಸುವ ಕಾರ್ಯವನ್ನು ಆರಂಭ ಮಾಡಬಹುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಹಿರಿಯ ನಾಗರಿಕ ವೇದಿಕೆಯ ಸಂಚಾಲಕ ಸಿ.ಎನ್.ವಿಶ್ವನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಪಪಂ ಅಧ್ಯಕ್ಷ ಅಣ್ಣೀರ ಹರೀಶ್, ಹಿರಿಯ ನಾಗರಿಕ ವೇದಿಕೆಯ ಸದಸ್ಯ ಚೆಪ್ಪುಡಿರ ಪೊನ್ನಪ್ಪ, ಕ್ಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಸೋಮಣ್ಣ, ಸಂಸ್ಥಾಪಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಇದ್ದರು.