ಪ್ರತಿನಿಧಿ ವರದಿ ಚನ್ನಪಟ್ಟಣ
ಪಟ್ಟಣದ ಹೊರ ವಲಯದ ಮೆಹದಿನಗರದಲ್ಲಿನ ಗ್ಲೋಬಲ್ ಶಾಲಾ ಆವರಣದಲ್ಲಿ ಗ್ಲೋಬಲ್ ಫೌಂಡೇಶನ್ ಆಶ್ರಯದಲ್ಲಿ ವಿಶ್ವ ಸಾಗರ ದಿನಾಚರಣೆಯನ್ನು ಆಚರಿಸಲಾಯಿತು.
ಗ್ಲೋಬಲ್ ಶಾಲಾ ಗ್ಲೋಬಲ್ ಸಮೂಹ ಸಂಸ್ಥೆಯ ಸಂಸ್ಥಾಪಕ ಮಹಮ್ಮದ್ ಸಲೀಂ ಮಾತನಾಡಿ, ಭೂಮಿ, ಪರಿಸರ ಸಂರಕ್ಷಣೆ ಮಾಡುವಂತೆ ಸಾಗರವನ್ನು ಮಲಿನಗೊಳಿಸದೇ ರಕ್ಷಿಸಬೇಕು. ಸಾಗರಗಳು ಮನುಷ್ಯನಿಗೆ ವಿವಿಧ ರೀತಿಯಲ್ಲಿ ಸಹಕಾರಿಯಾಗಿರುವುದಲ್ಲದೇ ಅವುಗಳಲ್ಲಿ ಅಸಂಖ್ಯಾತ ಜೀವಿಗಳು ಜೀವಿಸುತ್ತವೆ. ಈ ನಿಟ್ಟಿನಲ್ಲಿ ಸಾಗರಗಳನ್ನು ಮಲೀನವಾಗದಂತೆ ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಕರು, ನಮ್ಮ ಸಾಗರಗಳು ಮತ್ತು ಸಮುದ್ರ ಜೀವಿಗಳನ್ನು ಉಳಿಸುವ ಪ್ರಾಮುಖ್ಯತೆ ಮತ್ತು ಸಾಗರಗಳು ಮತ್ತು ನದಿಗಳನ್ನು ಕಲುಷಿತಗೊಳಿಸಲು ಮತ್ತು ಸಾವಿರಾರು ಸಮುದ್ರ ಪ್ರಾಣಿಗಳು ಮತ್ತು ಸಸ್ಯಗಳ ಜೀವಕ್ಕೆ ಅಪಾಯವನ್ನುಂಟುಮಾಡಲು ಮಾನವ ಕುಲವು ಹೇಗೆ ಕಾರಣವಾಗಿದೆ ಎಂಬುದರ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಲ್ಲಾ ಬಕಾಷ್ ಘೋರಿ, ಶಾಲೆಯ ಶೈಕ್ಷಣಿಕ ನಿರ್ದೇಶಕಿ ಖೈಸರ್ ಸಲೀಂ ಮತ್ತು ಪ್ರಾಂಶುಪಾಲ ವೇದಾನಂದ, ಗ್ಲೋಬಲ್ ಶಾಲೆಯ ಆಡಳಿತಾಧಿಕಾರಿ ರಾಂಪುರದ ಆರ್.ವಿ.ವೆಂಕಟಸ್ವಾಮಿ ಮತ್ತು ಶಾಲಾ ಶಿಕ್ಷಕರು ಇದ್ದರು.