ಪ್ರತಿನಿಧಿ ವರದಿ ಬೇಗೂರು
ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಿಶ್ವಗುರು ಬಸವಣ್ಣ ಅವರ ಜಯಂತ್ಯುತ್ಸವವನ್ನು ಆಚರಣೆ ಮಾಡಲಾಯಿತು.
ನಿಲಯ ಮೇಲ್ವಿಚಾರಕರ ಜಿ.ಎಸ್.ರಂಗಸ್ವಾಮಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಬಸವಣ್ಣ ಅವರು ಅಸಮಾನತೆ ಹಾಗೂ ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಎಲ್ಲ ಜಾತಿ ವರ್ಗಗಳಿಗೆ ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ ಕೊಡುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಕಾಯಕವೇ ಕೈಲಾಸ ಎನ್ನುವ ಸಂದೇಶವನ್ನು ಸಾರಿದರು ಎಂದರು.
ಅಡಿಗೆ ಮೇಲ್ವಿಚಾರಕ ಗೋಪಾಲ್, ವಿದ್ಯಾರ್ಥಿಗಳು ಇದ್ದರು.
11ಸಿಎಚ್ಎನ್.5:
ಚಿತ್ರವಿದೆ