ಹನೂರು: ಸಂಘಟನೆ ಶೋಷಣೆಗೆ ಒಳಪಟ್ಟವವರಿಗೆ ಆಸರೆಯಾಗಿ ನಿಲ್ಲುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಇಂದವಾಡಿ ಸಿದ್ದರಾಜು ತಿಳಿಸಿದರು.
ತಾಲೂಕಿನ ರಾಮಪುರ ಹೋಬಳಿ ಗೆಜ್ಜೆಲನತ್ತ ಗ್ರಾಮದಲ್ಲಿ ಹನೂರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹನೂರು ತಾಲೂಕು ಸಂಘಟನೆ ಸಂಚಾಲಕರಾದ ಗೋಪಿಶೆಟ್ಟಿಪುರ ಗ್ರಾಮದ ಮಾರಿಯಣ್ಣ ನೇತೃತ್ವದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಭೆಯ ಆಯೋಜಕ ಮಾರಿಯನ್ ಮಾತನಾಡಿ, ಹಿಂದೆ ಅನೇಕ ಸಾಮಾಜಿಕ ಸಮಸ್ಯೆಗಳು ನಮ್ಮಲ್ಲಿ ಇದ್ದವು ಇಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯಿಂದ ಪರಿಹಾರ ಸಿಕ್ಕಿದೆ ನಾವು ಸತ್ತರೆ ಹೂಳುವುದಕ್ಕೆ ಜಾಗ ಇರಲಿಲ್ಲ ಆದ್ರೆ ಇಂದು ನಮಗೆ ಸ್ಮಶಾನಕ್ಕೆ ಜಾಗ ಕೊಡಿಸಲಾಗಿದೆ ಇದ್ದರಿಂದ ನಮ್ಮ ಸಂಘಟನೆ ನಮಗೆ ಧೈರ್ಯ ತುಂಬಿದೆ ಎಂದು ತಿಳಿಸಿದ್ದರು.
ದಲಿತ ಸಂಘರ್ಷ ಸಮಿತಿಗೆ ಸ್ವಇಚ್ಛೆಯಿಂದ ಪೂವಯ್ಯ, ಚಿನ್ನಾರಾಜು, ಸಂತೋಷ್, ಸತ್ಯ, ಕುಮಾರ, ಗುರುಮೂರ್ತಿ, ಕೃಷ್ಣ, ಸಲೀಂ, ಮಾದೇವ, ಚಿತ್ರ, ರಾಜೇಶ್ವರಿ, ಈಶ್ವರಿ, ಸೌಂದರ್ಯ, ಪಳನಿಯಮ್ಮ, ಮಹದೇವಮ್ಮ, ಕಂದಮ್ಮ, ರಫೀಕ್, ಹರೀಶ್, ಸಂಪತ್, ಮಹೇಶ್ ಮತ್ತು ಯುವಜನತೆ ಸೇರ್ಪಡೆಗೊಂಡರು.
ಹನೂರು ತಾಲ್ಲೂಕು ಸಂಚಾಲಕ ಮಾದೇಶ್ ಬೈರನಾಥ, ಜಿಲ್ಲಾ ಸಂಘಟನೆ ಸಂಚಾಲಕ ಮಾಂಬಳ್ಳಿ ಹಿಂಡಿಗಯ್ಯ, ಹನೂರು ನಾಗರಾಜು, ಭಾಗ್ಯಮ್ಮ, ಎಂ.ಜಿ.ದೊಡ್ಡಿ ಮುರುಗೇಶ್, ವೀರ ಮತ್ತಿತರಿದರು.