ಹನೂರು: ತಾಲೂಕಿನಲ್ಲಿ ಯೋಗಿ ನಾರೇಯಣ ಕೈವಾರ ತಾತಯ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ರಾಜ್ಯ ಸಮಗ್ರ ಬಲಿಜ ವೇದಿಕೆಯ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.
ಯೋಗಿ ನಾರಾಯಣ ಕೈವಾರ ತಾತಯ್ಯ ಜಯಂತಿಯ ಪ್ರಯುಕ್ತ ತಾಲೂಕಿನ ವಿವಿಧ ಗ್ರಾಮಗಳಿಗೆ ಬಲಿಜ ಜನಾಂಗದ ಮುಖಂಡರುಗಳನ್ನು ಭೇಟಿ ಮಾಡಿ ಕೈವಾರ ತಾತಯ್ಯನವರ ಭಾವಚಿತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ತಾತಯ್ಯನವರ ಜಯಂತಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯಾಧ್ಯಕ್ಷರಾದ ಮುನಿಕೃಷ್ಣ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕಿನಲ್ಲಿ ಜಯಂತಿ ಆಚರಣೆ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ರಾಜ್ಯ ಗೌರವಾಧ್ಯಕ್ಷ ಕೃಷ್ಣಪ್ಪ, ಬಲಿಜ ಸಮುದಾಯದ ಮುಖಂಡರುಗಳಾದ ಮಾದೇಶ್, ಬಾಲಾಜಿ, ಮಹದೇವು, ಕೃಷ್ಣಣ್ಣ, ನಾಗೇಶ್, ಮುದ್ದು ಮುನಿ ಶೆಟ್ಟಿ, ರಾಜಣ್ಣ, ದಿಲೀಪ್, ಮುನಿಸ್ವಾಮಿ, ಮುತ್ತುರಾಜು, ವಿಜಿ, ಶ್ರೀರಂಗಶೆಟ್ಟಿ, ಪಳ್ಳಯ್ಯ ಶೆಟ್ಟಿ ವೆಂಕಟರಾಜು ಬಸವರಾಜು, ಮಾಳ ಶೆಟ್ಟಿ, ನಾಗಮಾದು ಸೇರಿದಂತೆ ಇನ್ನಿತರರು ಹಾಜರಿದ್ದರು.