ಮಂಡ್ಯ: ಕಾರ್ಗಿಲ್ ಯುದ್ದ ಸಂಭ್ರಮ ಮತ್ತು ವೀರಯೋಧರ ಸ್ಮರಣೆ ದಿನವಾಗಿದೆ ಎಂದು ನಿವೃತ್ತ ಸುಬೇದಾರ್ಮೇಜರ್ ಉದಯಕುಮಾರ್ ಹೇಳಿದರು.
ನಗರದ ಅರಕೇಶ್ವರನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅನನ್ಯ ಹಾರ್ಟ್ ಸಂಸ್ಥೆ, ರೋಟರಿ ಸಂಸ್ಥೆ, ನಾಲ್ವಡಿ ಲಯನ್ಸ್ ಸಂಸ್ಥೆ, ನೆಹರು ಯುವ ಕೇಂದ್ರ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಅರಕೇಶ್ವರನಗರ ಇರುವ ಸಹಯೋಗದಲ್ಲಿ ಆಯೋಜಿಸಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿ ವರ್ಷ ಜುಲೈ ೨೬ ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತಿದೆ. ಭಾರತೀಯರಿಗೆ ಇದು ಎಂದು ಮರೆಯದ ದಿನವಾಗಿದ್ದು, ಯುದ್ದದಲ್ಲಿ ಹುತಾತ್ಮರಾದ ವೀರಯೋಧರನ್ನು ಸ್ಮರಿಸಿಕೊಳ್ಳುವ ನೋವಿನ ದಿನವಾಗಿದೆ ಎಂದು ನುಡಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ ಮಾತನಾಡಿದರು. ರೋಟರಿ ಜಿಲ್ಲಾ ನಿರ್ದೇಶಕ ಹೊನ್ನೇಗೌಡ, ನಾಲ್ವಡಿ ಲಯನ್ಸ್ ಸಂಸ್ಥೆ ಅಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಕವಿಟಿ ಧನಂಜಯ, ಪ್ರ. ಪ್ರಾಂಶುಪಾಲ ಹನುಮಂತಯ್ಯ, ತಂಬಾಕು ನಿಯಂತ್ರಣ ಸಲಹೆಗಾರ ತಿಮ್ಮರಾಜು, ಅಕ್ಷಯ ಸಂಸ್ಥೆ ಅಧ್ಯಕ್ಷ ಲಕ್ಕಪ್ಪ, ಉಪನ್ಯಾಸಕರಾದ ಪ್ರೊ. ಮೃತ್ಯುಂಜಯ, ಡಾ.ಮನುಕುಮಾರ್, ರವಿಕುಮಾರ್, ನಾಗರಾಜು, ಕೃಷ್ಣೇಗೌಡ, ಪುಷ್ಪ ಮತ್ತಿತರರಿದ್ದರು.
ಮಂಡ್ಯ ನಗರದ ಅರಕೇಶ್ವರನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅನನ್ಯ ಹಾರ್ಟ್ ಸಂಸ್ಥೆ, ರೋಟರಿ ಸಂಸ್ಥೆ, ನಾಲ್ವಡಿ ಲಯನ್ಸ್ ಸಂಸ್ಥೆ, ನೆಹರು ಯುವ ಕೇಂದ್ರ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಅರಕೇಶ್ವರನಗರ ಇರುವ ಸಹಯೋಗದಲ್ಲಿ ಆಯೋಜಿಸಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಮಂಡ್ಯ ನಗರದ ಅರಕೇಶ್ವರನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅನನ್ಯ ಹಾರ್ಟ್ ಸಂಸ್ಥೆ, ರೋಟರಿ ಸಂಸ್ಥೆ, ನಾಲ್ವಡಿ ಲಯನ್ಸ್ ಸಂಸ್ಥೆ, ನೆಹರು ಯುವ ಕೇಂದ್ರ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಅರಕೇಶ್ವರನಗರ ಇರುವ ಸಹಯೋಗದಲ್ಲಿ ಆಯೋಜಿಸಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಸುಬೇದಾರ್ಮೇಜರ್ ಉದಯಕುಮಾರ್ ಅವರನ್ನು ಗೌರವಿಸಲಾಯಿತು.