ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ತಾಲೂಕಿನ ಮಿನಿ ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಮುಖ್ಯ ಭಾಷಣಕಾರ ಶಿಕ್ಷಕ ಆನಂದ್ ಮಾತನಾಡಿ, 1515ರಲ್ಲಿ ಬೆಂಗಳೂರು ನಗರವನ್ನು ಕಟ್ಟಲು ಸರಿಸುಮಾರು ಐದಾರು ಶತಮಾನದ ಹಿಂದೆಯೇ ಅಡಿಪಾಯ ಹಾಕಿದ ದಕ್ಷ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ಎಂದು ತಿಳಿಸಿದರು.
ತಾಲೂಕು ದಂಡಾಧಿಕಾರಿ ಶ್ರೀನಿವಾಸ್ ಮಾತನಾಡಿ, ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ರಾಜ್ಯವಾಗಿದ್ದ ಯಲಹಂಕ ಭಾಗದ ಪಾಳೇಗಾರರಾಗಿದ್ದರು. ಹಂಪಿಯ ಗತ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರ ದೂರದೃಷ್ಟಿಯಲ್ಲಿ ಬೆಂಗಳೂರನ್ನು ನಿರ್ಮಿಸಲಾಗಿದೆ. ಇದು ಕರ್ನಾಟಕದ ರಾಜಧಾನಿಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಂಗಳೂರು ಒಂದಾಗಿದೆ ಎಂದರು.
ಒಕ್ಕಲಿಗ ಸಮಾಜದ ತಾಲೂಕು ಅಧ್ಯಕ್ಷ ಡಿ.ಸುರೇಂದ್ರಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇಂದು ಸರಳವಾಗಿ ಆಚರಣೆ ಮಾಡಿದ್ದೇವೆ. ಮುಂದಿನ ದಿನದಲ್ಲಿ ದಿನಾಂಕ ನಿಗದಿಪಡಿಸಿ ರಾಜ್ಯ, ಕೇಂದ್ರ, ಜಿಲ್ಲೆನಾಯಕರನ್ನು ಸಂಪರ್ಕಸಿ ಅದ್ದೂರಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ಒಕ್ಕಲಿಗ ಸಮಾಜದ ಗೌರವಾಧ್ಯಕ್ಷ ಕೃಷ್ಣೆಗೌಡ, ಸಣ್ಣರಾಮಪ್ಪ, ಇ.ಒ.ಧರಣೇಶ್, ಟಿ.ರವಿಕುಮಾರ್, ಹಿರಿಯ ಮುಖಂಡ ನರಸಿಂಹಗೌಡ, ಹಿರಹಳ್ಳಿ ಸೋಮೇಶ್, ಜಿಯರ ನಾಗನಾಯಕ, ಪ್ರಕಾಶ್, ಡ್ರಿಪ್ ಗುರುಸ್ವಾಮಿ, ಜೀವಿಕ ಬಸವರಾಜ್, ಚೆಲುವ, ರೈತ ಮುಖಂಡ ಓಕೆ ಮಹೇಂದರ್, ನವೀನಗೌಡ, ಹೈರಿಗೆ ಉಮೇಶ್, ಸತೀಶ್, ಡಿ.ಸಿ.ಸ್ವಾಮಿ, ನಾಗರಾಜ್, ಮಟಕೆರೆ ರಾಜೇಶ್, ಮೀನ್ ರಾಜಣ್ಣ, ಸಾಗರೆ ಮಹೇಂದ್ರ, ರಾಮಸ್ವಾಮಿ, ಶ್ರೀಧರ್, ವಕೀಲ ರವಿಕುಮಾರ್, ಗುಂಡತ್ತೂರು ಮಹೇಶ್, ಪ್ರಕಾಶ್, ಶಿವಯ್ಯ, ಕುಮಾರ್, ಅನೇಕ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.