ಶಾಸಕ ಜಿ.ಡಿ.ಹರೀಶ್ಗೌಡ ಅಭಿಪ್ರಾಯ
ಪ್ರತಿನಿಧಿ ವರದಿ ಹುಣಸೂರು
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಯೋಜನೆಗಳೇ ಇಂದು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಗುರುತಿಸಿಕೊಳ್ಳುವಂತಾಗಲು ಕಾರಣವಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ಗೌಡ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಿದರು. ಅವರು ಜಾರಿಗೆ ತಂದ ಯೋಜನೆಗಳು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ರೂಪಿಸಿದ್ದಾಗಿತ್ತು. ಪರಿಸರ ಕಾಳಜಿ, ಆರ್ಥಿಕ ಅಭಿವೃದ್ಧಿ, ಸಂಸ್ಕೃತಿ, ಪರಂಪರೆಗಳ ಉಳಿಸುವ ಕಾರ್ಯ ನಡೆಯಿತು. ಇಂದು ಬೆಂಗಳೂರು ಸಿಲಿಕಾನ್ ಸಿಟಿ, ಅಂತಾರಾಷ್ಟ್ರೀಯ ಮಟ್ಟದ ನಗರವಾಗಿ ಬೆಳೆಯಲು ಸಾಧ್ಯವಾಗಿದೆ. ಬೆಂಗಳೂರಿನ ಕುರಿತಾಗಿ ಕೆಂಪೇಗೌಡರ ಕಾಳಜಿ ಮತ್ತು ಕನಸನ್ನು ಇಂದು ನ್ಯೂನ್ಯತೆಗಳ ನಡುವೆಯೂ ಸಾಕಷ್ಟು ಸಾಧ್ಯವಾಗಿಸಿದ್ದೇವೆ. ಹುಣಸೂರು ನಗರ ಅಗಾಧವಾಗಿ ಬೆಳೆಯುತ್ತಿದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್ಗೌಡ ಮಾತನಾಡಿ, ಕೆಂಪೇಗೌಡರ ಅಭಿವೃದ್ಧಿ ಕಾರ್ಯಗಳು ಸರ್ವಜನಾಂಗದ ಹಿತಕ್ಕಾಗಿ ರೂಪಿತವಾಗಿತ್ತು. ವ್ಯಾಪಾರಕೇಂದ್ರಗಳು, ಕೆರೆಕಟ್ಟೆಗಳು, ಧಾರ್ಮಿಕ ಕ್ಷೇತ್ರಗಳು ಎಲ್ಲವನ್ನು ಒಳಗೊಂಡು ಅಭಿವೃದ್ಧಿ ಅವರ ಕನಸಾಗಿತ್ತು ಎಂದರು.
ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಯ ಮೂಲಜನಕ ಕೆಂಪೇಗೌಡರಾಗಿದ್ದಾರಂದು ಸ್ಮರಿಸಿದರೆ, ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಕೋಟೆ, ಪೇಟೆ, ಗುಡಿ ಮತ್ತು ಕೆರೆ ಕೆಂಪೇಗೌಡರ ಅಭಿವೃದ್ಧಿಯ ನಾಲ್ಕು ಮಂತ್ರಗಳಾಗಿದ್ದವು ಎಂದು ಹೇಳಿದರು.
ಮುಖಂಡ ಬಿಳಿಕೆರೆ ಪ್ರಸನ್ನ ಮಾತನಾಡಿದರು. ಒಕ್ಕಲಿಗ ಸಂಘದ ಖಜಾಂಚಿ ಕಿರಂಗೂರು ಬಸವರಾಜು, ಪದಾಧಿಕಾರಿಗಳು, ದಲಿತಮುಂಖಡರಾದ ನಿಂಗರಾಜ ಮಲ್ಲಾಡಿ, ಡಿ.ಕುಮಾರ್, ಕಾಯಕ ಸಮಾಜದ ತಾಲೂಕು ಅಧ್ಯಕ್ಷ ಹೊನ್ನಪ್ಪ, ಅಸ್ವಾಳ್ ಕೆಂಪೇಗೌಡ, ಪ್ರೇಮ್ಕುಮಾರ್, ವಕೀಲ ಪುಟ್ಟರಾಜು, ಹೊಸೂರು ಅಣ್ಣಯ್ಯ, ನಗರಸಭಾ ಸದಸ್ಯ ಕೃಷ್ಣರಾಜಗುಪ್ತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್.ಜಯರಾಂ, ಪಿ.ಆರ್.ರಾಚಪ್ಪ, ಸುಬ್ಬರಾವ್, ಭಾಸ್ಕರ್, ಗ್ರೇಡ್ ೨ ತಹಸೀಲ್ದಾರ್ ನರಸಿಂಹಯ್ಯ, ಶಿರಸ್ತೇದಾರ್ ಶ್ರೀಪಾದ್, ಪೌರಾಯುಕ್ತೆ ಕೆ.ಎಂ.ಮಾನಸ ಸೇರಿದಂತೆ ಸಮಾಜದಬಂಧುಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
೨೭ಊUಓ೭: ಹುಣಸೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಶಾಸಕ ಜಿ.ಡಿ.ಹರೀಶ್ಗೌಡ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಸೀಲ್ದಾರ್ ಮಂಜುನಾಥ್, ನಿಂಗರಾಜ ಮಲ್ಲಾಡಿ, ರಮೇಶ್, ಹೊನ್ನಪ್ಪ ಇದ್ದರು.