ಮೈಸೂರು ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಯುವಕನಿಗೆ ಚಾಕು ಇರಿತವಾಗಿದೆ.
ಬೆಳಿಗ್ಗೆ ಕೆ ಆರ್ ನಗರ ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಆವರಣದಲ್ಲಿ ಘಟನೆ ನಡೆದಿದೆ. 19 ವರ್ಷದ ಕೃಷ್ಣ ಎಂಬಾತನಿಗೆ ಚಾಕು ಇರಿತದಿಂದ ತೀವ್ರ ಗಾಯವಾಗಿದೆ. ಕೃಷ್ಣ ಮೂಲತಃ ಚೀರನಹಳ್ಳಿ ಗ್ರಾಮದ ನಿವಾಸಿ ಆಗಿದ್ದಾನೆ.ಅದೇ ಗ್ರಾಮದ 24 ವರ್ಷದ ರೌಡಿಶೀಟರ್ ಸುದೀಪ್ ಎಂಬಾತನಿಂದ ಕೃತ್ಯ ಎಸಗಲಾಗಿದೆ. ಕೃಷ್ಣನ ಎದೆ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಗಾಯಾಳು ಕೃಷ್ಣನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಕಿತ್ಸೆ ನೀಡಲಾಗಿದೆ. ಘಟನೆ ನಂತರ ಆರೋಪಿ ಸುದೀಪ್ ಪರಾರಿ ಆಗಿದ್ದಾನೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.