ಎಆರ್ ಕೆ ಸೇರಿ ಮೂವರು ಪ್ರಾಣಾಪಾಯದಿಂದ ಪಾರು
ಪ್ರತಿನಿಧಿ ವರದಿ ಕೊಳ್ಳೇಗಾಲ
ಲೋಕಸಭಾ ಚುನಾವಣಾ ಪ್ರಚಾರ ಮುಗಿಸಿ ಬುಧವಾರ ರಾತ್ರಿ ಕೊಳ್ಳೇಗಾಲದಿಂದ ಮೈಸೂರಿನ ತಮ್ಮ ಮನೆಗೆ ತೆರಳಲು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಲಿಸುತ್ತಿದ್ದ ಕಾರು ಅಪಘಾತವಾಗಿದ್ದು, ಅದೃಷ್ಟವಷಾತ್ ಕಾರಿನಲ್ಲಿದ್ದ ಶಾಸಕರು ಸೇರಿದಂತೆ ಆಪ್ತ ಸಹಾಯಕ ಚೇತನ್ ಹಾಗೂ ಕಾರು ಚಾಲಕ ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಧವಾರ ತಡ ರಾತ್ರಿ 11-48 ಗಂಟೆಯಲ್ಲಿ ಮೈಸೂರಿಗೆ ಚಲಿಸುತ್ತಿದ್ದ ಕಾರು ಮೈಸೂರು ಹೊರ ವಲಯದ ನಾಯಂಡಳ್ಳಿ ಬಳಿ ದಿಢೀರ್ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಕಾರು ರಸ್ತೆ ಬದಿಗೆ ನುಗ್ಗಿದ್ದು, ಪಕ್ಕದಲ್ಲಿದ್ದ ಕಲ್ಲೊಂದಕ್ಕೆ ಡಿಕ್ಕಿಯಾಗಿ ನಿಂತಿದೆ.
ಪರಿಣಾಮ, ಕಾರಿನ ಮುಂಭಾಗ ಜಖಂಗೊಂಡು ಹಾನಿಯಾಗಿದೆ. ಘಟನೆ ಕುರಿತು ಪ್ರತಿನಿಧಿ ಜತೆ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ದೇವರ ಕೃಪೆ ಹಾಗೂ ಕೊಳ್ಳೇಗಾಲ ಕ್ಷೇತ್ರದ ಜನರ ಆಶೀರ್ವಾದದಿಂದ ಆಶ್ಚರ್ಯಕರ ರೀತಿಯಲ್ಲಿ ಯಾವುದೇ ತೊಂದರೆ ಇಲ್ಲದಂತೆ ಕಾರು ಅಪಘಾತದಲ್ಲಿ ಪಾರಾಗಿದ್ದೇನೆ ಎಂದು ಹೇಳಿದ್ದಾರೆ.
25ಕೆಜಿಎಲ್-2
ಫೋಟೋ ಶೀರ್ಷಿಕೆ:
ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಲಿಸುತ್ತಿದ್ದ ಕಾರು ಬುಧವಾರ ತಡ ರಾತ್ರಿ ಮೈಸೂರು ಹೊರ ವಲಯದ ನಾಯಂಡಳ್ಳಿ ಬಳಿ ದಿಡೀರ್ ಟೈರ್ ಬ್ಲಾಸ್ಟ್ ಆಗಿ ರಸ್ತೆ ಬದಿಯ ಕಲ್ಲೊಂದಕ್ಕೆ ಡಿಕ್ಕಿಯಾಗಿರುವುದು.