ಚಿಕ್ಕಬಳ್ಳಾಪುರ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತನಿಖಾದಳದಿಂದ ಡಿಎಚ್ಒ ಡಾ.ಮಹೇಶ್ ಕುಮಾರ್ ಮತ್ತು ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್ ನೇತೃತ್ವದ ಸಿಬ್ಬಂದಿ ಜಿಲ್ಲಾಸ್ಪತ್ರೆ ಮತ್ತು ಮುನ್ಸಿಪಲ್ ಕಾಲೇಜ್ ಬಳಿ ವಿವಿಧ ಅಂಗಡಿಗಳ ಮೇಲೆ ಕೋಟ್ಪ ದಾಳಿ ನಡೆಸಿದರು.
ದಾಳಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಕೋಟ್ಪಕಾಯ್ದೆಯಡಿಯಲ್ಲಿ ದಂಡ ವಿಧಿಸಲಾಯಿತು. ಒಟ್ಟು ೨೦ ಪ್ರಕರಣಗಳಿಗೆ ೧೬೦೦ ರೂಗಳ ದಂಡ ಸಂಗ್ರಹಿಸಲಾಯಿತು.
ಅಂಗಡಿ ಮಾಲೀಕರಿಗೆ ಕೋಟ್ಪ-೨೦೦೩ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಬಾರದು ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು. ತಾಂಬಾಕು ವಸ್ತುಗಳನ್ನು ಮಾರಾಟ ಮಾಡಲು ಪರವಾನಗಿ ಪಡೆಯಲು ಸೂಚಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ರಾಘವೇಂದ್ರ, ಮಂಜುನಾಥ, ಚೌಡರೆಡ್ಡಿ, ಟಿಎಚ್ಒ ಕಚೇರಿಯ ಗಂಗಾಧರ್ ಪೋಲೀಸ್ ಸಿಬ್ಬಂದಿ ಇದ್ದರು.