ಮುಂಬೈ, ಸೆ.16: ಕಾಮಕಾಜಿ ಬಿ 2 ಬಿ ಮೀಡಿಯಾದ 15 ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯಡಿ ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವರ್ಗಗಳಲ್ಲಿ ಕೆಎಸ್ಆರ್ಟಿಸಿಗೆ (KSRTC) ಎರಡು ಪ್ರಶಸ್ತಿ ಸೇರಿದಂತೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಎರಡು ಪ್ರಶಸ್ತಿಗಳನ್ನು ಮುಂಬೈನಲ್ಲಿ (Mumbai) ಹಾಗೂ ಮತ್ತೆರಡು ಪ್ರಶಸ್ತಿಗಳನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ಕಾಮಕಾಜಿ ಬಿ 2 ಬಿ ಮೀಡಿಯಾದ 15 ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯಡಿ ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವರ್ಗಗಳಲ್ಲಿ ನಿಗಮಕ್ಕೆ ಎರಡು ಪ್ರಶಸ್ತಿಗಳು ಲಭಿಸಿದೆ. ಮುಂಬಯಿಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬ್ಲೂ ಯಾಂಡರ್ ವ್ಯವಸ್ಥಾಪಕ ನಿರ್ದೇಶಕ ವಿನೋಕ್, ಉಪಾಧ್ಯಕ್ಷ ಉಮೇಶ್ ಗೌರ್, ಬ್ಲೂ ಯಾಂಡರ್ ನಿರ್ದಶಕಿ ಶ್ರೀಮತಿ ಅನುರಾಧ ಅವರು ಪ್ರಶಸ್ತಿಯನ್ನು ನಿಗಮದ ಅಧಿಕಾರಿಗಳಾದ ಬಿ.ಎಸ್. ಶಿವಕುಮಾರಯ್ಯ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಹಾಗೂ ಪ್ರಸನ್ನ ಕುಮಾರ್ ಎಂ. ಬಾಳನಾಯಕ್, ಮುಖ್ಯ ಕಾನೂನು ಅಧಿಕಾರಿ ಅವರಿಗೆ ಪ್ರದಾನ ಮಾಡಿದರು.