ಕೊಳ್ಳೇಗಾಲ: ತಾಲೂಕಿನ ತೇರಂಬಳ್ಳಿ ಗ್ರಾಮದ ನಿವಾಸಿ ಎಸ್.ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ವಿಚಾರ ಮಂಚ್ ಕರ್ನಾಟಕ ಸಂಘಟನೆಯ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಮಂಚ್ ರಾಜ್ಯಾಧ್ಯಕ್ಷ ಎಂ.ರಾಜಶೇಖರ್ ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಿದ್ದು, ಸಮಾಜದ ಬಗೆಗಿನ ಕಳಕಳಿ, ನಿಷ್ಠಾವಂತಿಕೆ, ಮಾನವೀಯತೆಗೆ ನೀವು ಕೊಡುವ ಗೌರವ, ಕಠಿಣ ಕೆಲಸ, ಸಂಸ್ಥೆಯ ಕೌಶಲಗಳು, ಮೂಲಭೂತ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಹೋರಾಟವೆಲ್ಲವನ್ನು ಮನಗೊಂಡು ಈ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಎಸ್.ಕುಮಾರಸ್ವಾಮಿಗೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
5ಕೆಜಿಎಲ್-2 ಫೋಟೋ ಶೀರ್ಷಿಕೆ: ಮಂಚ್ ಜಿಲ್ಲಾ ಉಪಾಧ್ಯಕ್ಷ ಎಸ್.ಕುಮಾರಸ್ವಾಮಿ ಅವರ ಫೋಟೋ ಇದೆ.