ಪ್ರತಿನಿಧಿ ವರದಿ ಹೊಳೆನರಸೀಪುರ
ಶ್ರೀ ಕ್ರೋಧಿನಾಮ ಸಂವತ್ಸರದ ಶ್ರಾವಣ ಮಾಸದ ಪ್ರಯುಕ್ತ ಸೆ.1ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯವರಿಗೆ ಸಾಮೂಹಿಕ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಅರ್ಚಕ ನಾರಾಯಣ ಹಾಗೂ ರಾಮ್ ಪ್ರಸಾದ್ ತಿಳಿಸಿದರು.
ಸೆ.1ರಂದು ಬೆಳಗ್ಗೆ 7-45ಕ್ಕೆ ಪಂಚಾಮೃತ ಅಭಿಷೇಕ, 9-30ಕ್ಕೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, 10 ಗಂಟೆಗೆ ವಿಶ್ವಕ್ಸೇನ ಆರಾಧನೆ, ಪುಣ್ಯಾಹ, ವಾಚನ, ಸೇವಾಕತೃಗಳಿಂದ ಸಂಕಲ್ಪ, ಶ್ರೀ ಮಹಾಗಣಪತಿ ಪೂಜೆ, ಕಂಕಣ ಧಾರಣೆ, 10-45ಕ್ಕೆ ಕಲ್ಯಾಣೋತ್ಸವ ಕಾರ್ಯಕ್ರಮ, ಮಧ್ಯಾಹ್ನ 1- 15ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ9844431956,8277498754 ಕ್ಕೆ ಸಂಪರ್ಕಿಸಲು ಕೋರಿದ್ದಾರೆ.