– ಎಂ.ಕೆ.ಸೋಮಶೇಖರ್ ಅಭಿಪ್ರಾಯ
– ಕರ್ನಾಟಕ ಸಂಭ್ರಮ-೫೦ ಸಾಂಸ್ಕೃತಿಕ ಕಾರ್ಯಕ್ರಮ
ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಗೃಹಶೋಭೆ ಅವರ ಆಶ್ರಯದಲ್ಲಿ ಜರುಗುತ್ತಿರುವ ಕರ್ನಾಟಕ ಸಂಭ್ರಮ-೫೦ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗೃಹಶೋಭೆ ಹೆಚ್ಚು ಮಹಿಳೆಯರ ಆಕರ್ಷಿತವಾದ ಕಾರ್ಯಕ್ರಮ. ಕಳೆದ ಹಲವಾರು ವರ್ಷಗಳಿಂದಲೂ ನಿರಂತರವಾಗಿ ಮೈಸೂರಿನ ಜನತೆಗೆ ಸೇವೆಯನ್ನು ನೀಡುತ್ತಿದ್ದು, ನ್ಯಾಯಯುತವಾದ ಬೆಲೆಯಲ್ಲಿ ವಿವಿಧ ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲ ವರ್ಗದ ಜನರಿಗೂ ಕೈಗೆಟಕುವಂತಿದೆ. ವಿಶೇಷವಾಗಿ ವಸ್ತುಪ್ರದರ್ಶನದ ಆವರಣದಲ್ಲಿ ಈ ಮೇಳವನ್ನು ಆಯೋಜಿಸಿರುವುದು ರಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಅವಕಾಶ ಕಲ್ಪಿಸಿದಂತಾಗಿದೆ ಎಂದರು.
ವಸ್ತುಪ್ರದರ್ಶನ ಅಧ್ಯಕ್ಷ ಅಯೂಬ್ ಖಾನ್, ಗೃಹಶೋಭೆ ಮ್ಯಾನೇಜಿಂಗ್ ಡೈರೇಕ್ಟರ್ ನಾಗಚಂದ್ರ, ಕೃಷ್ಣ, ಜಾನಪದ ಗಾಯಕ ದೇವಾನಂದವರ ಪ್ರಸಾದ್, ನಿರೂಪಕ ಅಜಯ್ ಶಾಸ್ತ್ರಿ, ಮಹ್ಮದ್ ಫಾರೂಖ್ ಮತ್ತಿತರರು ಉಪಸ್ಥಿತರಿದ್ದರು.