ಪ್ರತಿನಿಧಿವರದಿ ಮಳವಳ್ಳಿ
ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ದಿ ಜತೆಗೆ ಜಿಲ್ಲಾ ಕೇಂದ್ರದಲ್ಲಿ ಬಸವಭವನ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಿಕೊಂಡಿರುವ ನಮ್ಮ ತಂಡಕ್ಕೆ ಅರ್ಶೀವದಿಸಬೇಕೆಂದು ಅಖಿಲಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಿ.ಶಂಕರ್ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಮಾಜದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಚುನಾವಣೆ ಜು.೨೧ ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಏಳು ತಾಲೂಕಿನಲ್ಲಿಯೂ ನಮ್ಮ ತಂಡಕ್ಕೆ ಮತದಾರರು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಮಂಡ್ಯ ನಗರದಲ್ಲಿ ನಿವೇಶನವನ್ನು ಗುರುತಿಸಿ ಸ್ವಂತ ಹಣದಿಂದಲೇ ಬಸವ ಭವನ ನಿರ್ಮಾಣಕ್ಕೆ ಚಾಲನೆ ಕೊಡುವುದರ ಜತೆಗೆ ಎಲ್ಲರ ಸಹಕಾರ ಮತ್ತು ಸಹಾಯದೊಂದಿಗೆ ಭವನ ಕಾಮಗಾರಿಯನ್ನು ಪೂರ್ಣಗೊಳಿಸುವುದು. ಎಲ್ಲ ತಾಲೂಕು ಕೇಂದ್ರಗಳಲ್ಲೂ ಬಸವಭವನ ನಿರ್ಮಾಣಕ್ಕೆ ಸಂಘಟಿತರಾಗುವುದಾಗಿ ಭರವಸೆ ನೀಡಿದರು.
ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕುಂದೂರು ಮೂರ್ತಿ ಮಾತನಾಡಿ, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಡಿ.ಶಂಕರ್ಅವರು ಸಮಾಜಮುಖಿ ಸೇವೆ, ಸರಳತೆ ಜತೆಗೆ ಸಮುದಾಯವನ್ನು ಒಗ್ಗಟ್ಟಿನಿಂದ ತೆಗೆದುಹೋಗುವ ಶಕ್ತಿ ಹೊಂದಿದ್ದು, ಇವರಿಗೆ ತಾಲೂಕು ಮಹಾ ಸಭಾದ ವತಿಯಿಂದ ಸಂಪೂರ್ಣವಾಗಿ ಬೆಂಬಲ ನೀಡಲಾಗುದೆಂದು ಭರವಸೆ ನೀಡಿದರು.
ಮುಖಂಡ ಭಭ್ರುವಾಹನ, ಶಿವಕುಮಾರ್, ಮಂಡಿಬೆಟ್ಟಹಳ್ಳಿ ಮಂಜುನಾಥ್, ದಯಾನಂದ್ ಪಾಟೀಲ್ ಸೇರಿದಂತೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಳು ಹಾಜರಿದ್ದರು.
19 ಎಂಎಲ್ವಿ 1: ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆಯಲ್ಲಿಯಲ್ಲಿ ಸ್ಪರ್ಧಿಸಿರುವ ಡಿ.ಶಂಕರ್ ಬಣದ ತಂಡ ಸಮುದಾಯದ ಮುಖಂಡರ ಸಭೆ ನಡೆಸಿದರು.