ಮೈಸೂರು: ಮುಡಾ ಬಹುಕೋಟಿ ಹಗರಣ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಲೋಕಾಯುಕ್ತ ಅಧಿಕಾರಿಗಳ ತಂಡ ಲಗ್ಗೆ ಇಟ್ಟಿದೆ. ಮುಡಾದಲ್ಲಿ ದಾಖಲೆಗಳ ಶೋಧಕಾರ್ಯ ನಡೆಸಿದ ಲೋಕಾಯುಕ್ತ ತಂಡ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದೆ. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತಂಡದಿಂದ ಶೋಧಕಾರ್ಯ ನಡೆದಿದ್ದು, ಡಿವೈಎಸ್ಪಿಗಳಾದ ಮಾಲ್ತೇಶ್, ಮ್ಯಾಥ್ಯೂ ಥಾಮಸ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
ಅಗತ್ಯ ದಾಖಲೆಗಳ ಸಂಗ್ರಹದಲ್ಲಿ ನಿರತರಾದ ಅಧಿಕಾರಿಗಳು ಹಲವು ಪ್ರಶ್ನೆಗಳನ್ನ ಮುಡಾ ಅಧಿಕಾರಿಗಳ ಬಳಿ ಕೇಳಿದ್ದಾರೆ. ದೂರುದಾರ ಸ್ನೇಹಮಯಿ ಕೃಷ್ಣ ಕೂಡ ಮುಡಾದ ಆವರಣದಲ್ಲಿ ಉಪಸ್ಥಿತಿಯಿದ್ದು, ಲೋಕಾಯುಕ್ತ ತಂಡ ಕೇಳುವ ಮಾಹಿತಿಗಳನ್ನು ಸ್ನೇಹಮಯಿ ಕೃಷ್ಣ ನೀಡಿದ್ದಾರೆ.