ಮೈಸೂರು: ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದ ಏಕಾಶಿಲಾ ನಂದಿ ವಿಗ್ರಹಕ್ಕೆ ಮಹಾಭಿಷೇಕ ನೆರವೇರಿಸಲಾಯಿತು. ಅನೇಕ ವರ್ಷಗಳಿಂದ ಪ್ರತಿವರ್ಷದ ಕಾರ್ತಿಕ ಮಾಸದಲ್ಲಿ ಟ್ರಸ್ಟ್ ವತಿಯಿಂದ ಮಹಾಭಿಷೇಕ ಆಯೋಜಿಸುತ್ತಿದ್ದು ಈ ವರ್ಷವೂ ವಿವಿಧ ದ್ರವ್ಯಗಳು ಸೇರಿದಂತೆ ಲಾಮೃತ, ಪುಷ್ಪ ಮತ್ತು ಪತ್ರೆ ಸೇರಿದಂತೆ 38 ವೈವಿಧ್ಯಮಯ ಪದಾರ್ಥಿಗಳಿಂದ ನಂದಿಗೆ ಮಜ್ಜನ ಮಾಡಿಸಲಾಯಿತು. ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಸಕ್ಕರೆ, ಬಾಳೆಹಳ್ಳಿ, ದ್ರಾಕ್ಷಿ, ಬೆಲ್ಲ, ಖರ್ಜೂರ, ಸೌತೆಕಾಯಿ, ಕಬ್ಬಿನ ರಸ, ಎಳನೀರು, ನಿಂಬೆ ಹಣ್ಣು, ತೈಲ, ಗೋಧಿಹಿಟ್ಟು, ಕಡಲೆ ಹಿಟ್ಟು, ಅರಿಶಿಣ, ಕುಂಕಮ, ಸಿಂಧೂರ, ರಕ್ತ ಚಂದನ, ಭಸ್ಮ, ಗಂಧ ಸೇರಿಂತೆ 38 ವಿಧವಾದ ಅಭಿಷೇಕವನ್ನು ನಡೆಸಲಾಯಿತು. ನಂತರದಲ್ಲಿ ರುದ್ರಾಭಿಷೇಕ, ಸುಗಂಧ ದ್ರವ್ಯದ ಅಭಿಷೇಕ ಮಾಡಿ ನಾಡಿಗೆ ಸುಖ, ಶಾಂತಿ ಮತ್ತು ನೆಮ್ಮದಿ ನೀಡಲೆಂದು ಪ್ರಾರ್ಥಿಸಿ ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ 16ನೇ ವರ್ಷದ ಮಹಾಭಿಷೇಕವನ್ನು ನಡೆಸಲಾಯಿತು.
ನಂದಿ ಪ್ರತಿಮೆಯ ಇತಿಹಾಸ: ಬೆಟ್ಟದ ಸಾವಿರ ಮೆಟ್ಟಿಲುಗಳ ಪೈಕಿ 600 ಮೆಟ್ಟುಲುಗಳು ಹತ್ತಿರ ಹೋದಂತೆ ದೊಡ್ಡದಾದ ನಂದಿಯ ಪ್ರತಿಮೆ ಪ್ರವಾಸಿಗೆರ ಮನವನ್ನು ಸೆಳೆಯುತ್ತದೆ ಇದನ್ನ ಕಟ್ಟಿಸಿದವರು ದೊಡ್ಡ ದೇವರಾಜ ಒಡೆಯರ್.
ಹಾಗು ಈ ಪ್ರತಿಮೆ ಸುಮಾರು 350 ವರ್ಷಕ್ಕಿಂತ ಹಳೆಯದಾಗಿದ್ದು 16 ಅಡಿ ಎತ್ತರ 24 ಅಡಿ ಉದ್ದವಿದೆ. ಹಾಗೂ ಇದನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ ಎಂಬ ವಾಡಿಕೆಯಿದೆ. ಭಾರತದಲ್ಲಿ ಕಾಣುವ ಅತಿ ದೊಡ್ಡ ನಂದಿ ಪ್ರತಿಮೆ ಗಳಲ್ಲಿ ಇದು ಕೂಡ ಒಂದು.