ಬೆಂಗಳೂರು : ಮಹಾರಾಣಿ ಕಾಲೇಜು ಕ್ಯಾಂಪಸ್ನಲ್ಲಿ ಅಕ್ಟೋಬರ್ 7ರಂದು ಭೀಕರ ಅಪಘಾತ ಸಂಭವಿಸಿತ್ತು. ಗಂಗಾವತಿ ಮೂಲದ ವಿದ್ಯಾರ್ಥಿನಿ ಅಶ್ವನಿ 25 ದಿನ ಐಸಿಯೂನಲ್ಲಿ ಚಿಕಿತ್ಸೆ ಪಡೆದು ಬದುಕಿ ಬಂದಿದ್ದಾಳೆ. ಚಿಕಿತ್ಸೆಗೆ 11 ಲಕ್ಷ ಖರ್ಚಾಗಿದ್ದು ವಿವಿ 8 ಲಕ್ಷದ ಚೆಕ್ ನೀಡಿದೆ. ಉಳಿದ ಹಣ ಅಪಘಾತ ಮಾಡಿದ ಉಪನ್ಯಾಸಕ ನಾಗರಾಜ್ ಭರಿಸಬೇಕು. ಆದ್ರೆ ನಾಗರಾಜ್ ಮಾತ್ರ ಕಾಲ್ ರಿಸೀವ್ ಮಾಡ್ತಿಲ್ಲ. ಕೇಳಿದ್ರೆ ದುಡ್ಡಿಲ್ಲ ಅಂತಿದ್ದಾರೆ ಅಂತ ವಿದ್ಯಾರ್ಥಿನಿ ಕುಟುಂಬ ಅಳಲು ತೋಡಿಕೊಂಡಿದೆ.