ಮಂಡ್ಯ: ಜಿಲ್ಲೆಯ ಪ್ರಮುಖ ದೇಗುಲಗಳು ಸಂಜೆ ಬಳಿಕ ಬಂದ್ ಆಗಲಿವೆ. ಚಂದ್ರಗ್ರಹಣ ಹಿನ್ನೆಲೆ ದೇಗುಲಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಶ್ರೀ ರಂಗಪಟ್ಟಣದ ರಂಗನಾಥಸ್ವಾಮಿ, ನಿಮಿಷಾಂಬ ದೇವಸ್ಥಾನ, ಮದ್ದೂರಿನ ಹೊಳೆ ಆಂಜನೇಯ, ಚುಂಚನಗಿರಿಯ ದೇವಸ್ಥಾನ ಮತ್ತು ಮಂಡ್ಯದ ಲಕ್ಷ್ಮೀ ಜನಾರ್ದನ ಸೇರಿ ಹಲವು ದೇಗುಲಗಳು ಬಂದ್ ಆಗಲಿವೆ.