ಮಹಾಶಿವರಾತ್ರಿ ಜಾತ್ರೆ ಹಿನ್ನಲೆ ರಾಜ್ಯದಲ್ಲೇಡೆ ಬಹುದೊಡ್ಡ ಮಟ್ಟದಲ್ಲಿ ಆಚರಿಸಲಾಗಿದೆ. ಅದರಂತೆ ಹಲವಾರು ಭಕ್ತರು ಶಿವನ ಕೃಫಗೆ ಪಾತ್ರರಾಗಿದ್ದಾರೆ. ಈ ಮಧ್ಯೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರನಿಗೆ ಬರೋಬ್ಬರಿ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಧಾರಣೆ ಮಾಡಲಾಗಿದೆ. ಇದು ಬರೋಬ್ಬರಿ 1 ಕೆಜಿ 369 ಗ್ರಾಂ ತೂಕದ ಚಿನ್ನದ ಕಿರೀಟ ಆಗಿದ್ದು, ಚಿನ್ನದ ಕಿರೀಟದಲ್ಲಿ ಮಹದೇಶ್ವರ ಕಂಗೊಳಿಸಿದ್ದಾರೆ. ನೆರದಿದ್ದ ಭಕ್ತರು ಮಾದಪ್ಪನನ್ನ ಕೀರಿಟದಲ್ಲಿ ಕಣ್ತುಂಬಿಕೊಂಡಿದ್ದಾರೆ. ವರ್ಷಗಳಿಂದ ಪ್ರಾಧಿಕಾರದ ಖಜಾನೆಯಲ್ಲಿದ್ದ ಚಿನ್ನದ ಕಿರೀಟ, ಇದೇ ಮೊದಲ ಬಾರಿಗೆ ಮಾದಪ್ಪನಿಗೆ ಚಿನ್ನದ ಕಿರೀಟ ಧಾರಣೆ ಆಗಿದೆ. ಇನ್ನು ನಾವು ಒಂದು ನೀರಿನ ಬಾಟಲ್ ಯಾರಿಗಾದರೂ ಕೊಟ್ಟರೆ, ಅದನ್ನು ಇಂದಿನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ವಿಜೃಂಭಿಸುತ್ತೇವೆ. ಆದರೆ, ಹೆಸರು ಬಹಿರಂಗಪಡಿಸಲು ಇಚ್ಚಿಸದ ಭಕ್ತರೊಬ್ಬರಿಂದ ಈ ಚಿನ್ನದ ಕಿರೀಟ ಅರ್ಪಣೆ ಮಾಡಲಾಗಿದೆ. ಇನ್ನು ಕೀರಿಟ ಧಾರಣೆ ಮಾಡುತ್ತಿದ್ದಂತೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು, ಚಿನ್ನದ ಕಿರೀಟಧಾರಿ ಮಾದಪ್ಪನನ್ನು ಕಣ್ತುಂಬಿಕೊಂಡರು.