ಪ್ರತಿನಿಧಿ ವರದಿ ಮಾಲೂರು
ತಾಲೂಕಿನ ಅಂಚೆಮೂಸ್ಕೂರು ಬಳಿ ಇಂದು ಮಧ್ಯಾಹ್ನ ಆಟೋ ಪಲ್ಟಿಯಾಗಿ ವ್ಯಕ್ತಿ ಒಬ್ಬ ಸಾವನ್ನಪ್ಪಿದನೆ.
ದುನ್ನಸಂದ್ರ ದಿಂದ ಚಿಕ್ಕತಿರುಪತಿ ಕಡೆ ಬರುತ್ತಿದ್ದ ಆಟೋ ಆಂಚೆ ಮುಸ್ಕೂರು ಗ್ರಾಮದ ಬಳಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಮೃತಪಟ್ಟ ವ್ಯಕ್ತಿ ಎಟ್ಟಕೋಡಿ ಗ್ರಾಮದ ಚಿನ್ನಪ್ಪ (70) ಎಂದು ಗುರುತಿಸಲಾಗಿದೆ. ವಾಹನ ಚಾಲಕ ಕುಡಿದು ಚಾಲನೆ ಮಾಡಲಾಗುತ್ತಿತು ಎಂದು ಎನ್ನಲಾಗಿದೆ.
ಕುಡಿದು ವಾಹನ ಚಾಲನೆ ಮಾಡಿದ ಚಾಲಕ ಪರಾರಿಯಾಗಿದ್ದಾನೆ. ಆಟೋರಿಕ್ಷಾದಲ್ಲಿ ಸುಮಾರು 6 ಮಂದಿ ಪ್ರಯಾಣ ಮಾಡುತ್ತಿದ್ದರು. ಎಟ್ಟಕೋಡಿ ಗ್ರಾಮದ ಮಂಗಮ್ಮ ಎಂಬುವರಿಗೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಖಾಲಿಸಿಲಾಗಿದೆ.
ಸ್ಥಳಕ್ಕೆ ಮಾಲೂರು ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಗಳ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.