ಪ್ರತಿನಿಧಿ ವರದಿ ತುಮಕೂರು
ನಗರದ ಹೊರಪೇಟೆ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ವ್ಯಕ್ತಿ ಬಳಿ ಗಾಂಜಾ ಇದೆ ಎಂದು ಖಚಿತ ಮಾಹಿತಿ ಮೇರೆಗೆ ಸಿಇಎನ್ ಕ್ರೈಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮೊಹಮದ್ ಸಮೀರ್ ಬಿನ್ ಮೊಹಮದ್ ರಫಿ (19) ಬಂಧಿತ ಆರೋಪಿ. ಆರೋಪಿಯಿಂದ 50 ಸಾವಿರ ರೂ. ಬೆಲೆ ಬಾಳುವ 1 ಕೆಜಿ 220 ಗ್ರಾಂ ತೂಕದ ಗಾಂಜಾವನ್ನು ಅಮಾನತು ಪಡಿಸಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ.
ಆರೋಪಿಗಳ ಪತ್ತೆಗೆ ಶ್ರಮಿಸಿದ ಸಿ.ಇ.ಎನ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸಿ.ಎಚ್.ರಾಮಕೃಷ್ಣಯ್ಯ, ಸಿಬ್ಬಂದಿಗಳಾದ ಸೈಮನ್ ವಿಕ್ಟರ್, ದ್ವಾರಕೀಶ್, ರಾಜ್ ಕುಮಾರ್, ನಟರಾಜು, ಮಾರುತೀಶ್, ರವಿ ಕುಮಾರ ರೆಡ್ಡಿ, ಶಿವಕುಮಾರ್ ಲಮಾಣಿ, ಅನಿಲ್ ಕುಮಾರ್ ಅವರು ಕಾರ್ಯವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ ಐಪಿಎಸ್ ಪ್ರಶಂಸಿದ್ದಾರೆ.