ತಾಲೂಕು ಆರೋಗ್ಯ ಅಧಿಕಾರಿ ಟಿ.ರವಿಕುಮಾರ್ ಅಭಿಪ್ರಾಯ । ವಿಶ್ವ ಜನಸಂಖ್ಯಾ ದಿನಾಚರಣೆ
ಪ್ರತಿನಿಧಿ ವರದಿ ಸರಗೂರು
ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲಾಗುತ್ತೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಟಿ.ರವಿಕುಮಾರ್ ಹೇಳಿದರು
ತಾಲೂಕಿನ ಜೆಎಸ್ಎಸ್ ಪದವಿಪೂರ್ವ ಕಾಲೇಜಿನಲ್ಲಿ ಪೂರ್ವಭಾವಿಯಾಗಿ ವಿಶ್ವ ಜನಸಂಖ್ಯೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಜನಸಂಖ್ಯಾ ಸ್ಪೋಟದಿಂದ ಆಗುವ ಅಪಾಯಗಳು, ಬಡತನ, ಶಿಶುಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
ಪ್ರತಿವರ್ಷ ಜು.11 ರಂದು ಆಚರಿಸುತ್ತಾ ಬಂದಿದ್ದು, ಜನಸಂಖ್ಯಾ ಸ್ಪೋಟದಿಂದ ಹಾಗುವ ದುಷ್ಪರಿಣಾಮಗಳಾದ, ಆಹಾರ, ನೀರು, ಬಟ್ಟೆ, ನೆಲ, ವಸತಿಗಳ ಕೊರತೆ, ಅರಣ್ಯನಾಶ ನಿರುದ್ಯೋಗ ಬಡತನ ಹೆಚ್ಚಳ, ಸಂಪನ್ಮೂಲ ಕೊರತೆ, ವಾಯುಮಾಲಿನ್ಯದ ಹೆಚ್ಚಳ, ಸಾಮಾಜಿ ಅಸಮಾನತೆ. ಜನಸಂಖ್ಯಾ ನಿಯಂತ್ರಕ್ಕೆ ಆರೋಗ್ಯ ಇಲಾಖೆ ಮತ್ತು ಸರ್ಕಾರದ ವತಿಯಿಂದ, ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ಇರಬೇಕು. ಜನನಗಳ ನಡುವೆ ಅಂತರ ಮತ್ತು ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸಿ, ಹೆಣ್ಣು ಮಕ್ಕಳ ಶಿಕ್ಷಣ,ಸಮುದಾಯದ ಮತ್ತು ಪುರುಷರ ಸಹಬಾಗಿತ್ವದಿಂದ ಕುಟುಂಬ ಸದೃಡವಾಗುವುದು. ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮ ಒಂದೇ ದಿನಹಾಗದೇ, ಪ್ರತಿನಿತ್ಯದ ಕಾರ್ಯಕ್ರಮವಾಗಬೇಕು. ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ, ಅರಿವು ಮೂಡಿಸುವ ಉದ್ದೇಶದಿಂದ, ವಿಶ್ವ ಜನಸಂಖ್ಯೆ ದಿನಾಚರಣೆಯನ್ನು ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ತಹಸಿಲ್ದಾರ್ ರುಕೀಯಾ ಬೇಗಂ ಮಾತನಾಡಿ, ಜನಸಂಖ್ಯೆ ಸ್ಪೋಟದ ಬಗ್ಗೆ ಐದನೆಯ ತರಗತಿಯಿಂದ ಕಾಲೇಜಿನವರೆಗೂ ಇರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸುವುದು ತುಂಬಾ ಮಹತ್ವದಾಗಿದೆ. ಜನಸಂಖ್ಯೆಯಿಂದ ಆರ್ಥಿಕತೆ ಕುಸಿತ, ಕೊಳಚೆ ಪ್ರದೇಶ ಉದ್ಭವಿಸುವುದರಿಂದ ಅನಾರೋಗ್ಯ ಹೆಚ್ಚಳ ಮತ್ತು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಜನಸಂಖ್ಯೆ ನಿಯಂತ್ರಿಸಿ ನೆಮ್ಮದಿಯಿಂದ ಬದುಕು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಪಾರ್ಥ ಸಾರಥಿ ಮಾತನಾಡಿದರು. ಪಟ್ಟಣ ಪಂಚಾಯತಿ ಸದಸ್ಯರಾದ ರಾಧಿಕ ಶ್ರೀನಾಥ್, ಸದಸ್ಯರಾದ ನೂರಾಳಸ್ವಾಮಿ, ಚಲುವಕೃಷ್ಣ, ಸಣ್ಣತಾಯಮ್ಮ, ಆರೋಗ್ಯ ನಿರಿಕ್ಷಣಾಧಿಕಾರಿ ಮತ್ತು ಇಲಾಖೆಯ ಸಿಬ್ಬಂದಿ ಸಂತೋಷ್, ನಾಗೇಂದ್ರ, ಜಗದೀಶ್, ಶಾಂತಿ ಹಾಜರಿದ್ದರು.