ಪ್ರತಿನಿಧಿ ವರದಿ ಹೊಳೆನರಸೀಪುರ
ಪಟ್ಟಣಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದರು. ಚನ್ನರಾಯಪಟ್ಟಣದಿಂದ ಮಡಿಕೇರಿಗೆ ಹೋಗುವ ಮಾರ್ಗ ಸೂರನಹಳ್ಳಿ ಹತ್ತಿರ ಪುರಸಭೆಯ ಒಳಚರಂಡಿ, ಪಂಪ್ ಹೌಸ್, ರಿವರ್ ಬ್ಯಾಂಕ್ ರಸ್ತೆಯ ಯಾಸಿನ್ ನಗರದಲ್ಲಿನ ಮೂರು ಬೀದಿಗಳು ಜಲಾವೃತ ಗೊಂಡಿದ್ದ ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಟಿಪ್ಪು ಶಾದಿಮಹಲ್ ನಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಡಿ ನೀಡಿ ಸಂತ್ರಸ್ತೆಯರಿಗೆ ಸಾಂತ್ವನ ಹೇಳಿದರು. ಸಂಸದರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.