ಮೈಸೂರು: ಮಳೆಯಿಂದ ಮೈಸೂರಿನಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ತೋಟಗಾರಿಕೆಯಲ್ಲಿ ಕೃಷಿಯಲ್ಲಿ 6900 ಎಕ್ಟೇರ್ ನಷ್ಟು ಹಾನಿಯಾಗಿದೆ ಎಂದು ಮಸೂರಿನಲ್ಲಿ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈಸೂರಲ್ಲಿ 4 ಸಾವಿರ ಎಕ್ಟೇರ್ ಹಾನಿಯಾಗಿದೆ. 6 ಮನೆಗಳು ಕುಸಿತಿದೆ, 60 ಮನೆಗಳು ಗೋಡೆ ಕುಸಿದಿದೆ. ಬಿದ್ದು ಹೋಗಿರುವ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗಿದೆ. ಮನೆ ಗೋಡೆ ಕುಸಿತಗೊಂಡಿರುವ ಮನೆಗಳಿಗೆ 25 ಸಾವಿರ ರೂ. ರಿಪೇರಿಗೆ ನೀಡಲಾಗಿದೆ. ಕುಮಾರಸ್ವಾಮಿ ಅವರು ಅತಿವೃಷ್ಟಿ ಬಗ್ಗೆ ಸರ್ಕಾರಕ್ಕೆ ಬೇಕಿದ್ರೆ ಸಲಹೆ ನೀಡಲಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಮುಂದಾದರೆ ಅದಕ್ಕೆ ಉತ್ತರ ಇಲ್ಲ ಎಂದಿದ್ದಾರೆ.